ಪೆರಂಪಳ್ಳಿ: ಎಚ್ಚರಿಕೆ ಫಲಕ ಅಳವಡಿಕೆ

Update: 2017-11-23 16:50 GMT

ಉಡುಪಿ, ನ.23: ಇತ್ತೀಚೆಗೆ ಪೆರಂಪಳ್ಳಿಯ ರೈಲ್ವೆ ಸೇತುವೆಯಲ್ಲಿ ಹಲವು ಆತ್ಮಹತ್ಯೆ ಹಾಗೂ ಅಪರಾಧ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಮಣಿಪಾಲ ಪೋಲೀಸರು ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ.

ಇತ್ತೀಚೆಗೆ ಮೋಜಿಗಾಗಿ ಕೆಲವರು ಈ ರೈಲ್ವೇ ಸೇತುವೆ ಮೇಲೆ ಹೋಗಿ ಅಲ್ಲಿಂದ ಸೇತುವೆ ಕೆಳಗಿರುವ ಅಡಿ ಭಾಗದಲ್ಲಿ ಕುಳಿತು ಪಾರ್ಟಿ(ಅಮಲು ಪದಾರ್ಥ) ಸೇವನೆ ಮಾಡುತ್ತಿದ್ದು, ಇದರಿಂದ ಪ್ರಾಣ ಹಾನಿಯಾಗುವುದನ್ನು ಮನಗಂಡು ಈ ಎಚ್ಚರಿಕೆಯ ನೋಟೀಸು ಬೋರ್ಡನ್ನು ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News