ಗುರುವಾಯನಕೆರೆಯಲ್ಲಿ ಯುವಕನ ಕೊಲೆ

Update: 2017-11-24 09:51 GMT

ಬೆಳ್ತಂಗಡಿ, ನ.24: ಯುವಕನೊಬ್ಬನನ್ನು ಹೊಡೆದು ಕೊಲೆಗೈದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುವಾಯನಕೆರೆ ಬಳಿ ರೇಶ್ಮೆ ರೋಡ್ ಇಂದು ಮಧ್ಯಾಹ್ನ ನಡೆದಿದೆ.

ಮೃತರನ್ನು ಗುರುವಾಯನಕೆರೆ ಹವ್ಯಕ ಭವನದ ಬಳಿಯ ನಿವಾಸಿ ಪ್ರದೀಪ್(35) ಎಂದು ಗುರುತಿಸಲಾಗಿದೆ. ಎರಡು ತಂಡಗಳ ಮಧ್ಯೆ ಹೊಡೆದಾಟ ಸಂಭವಿಸಿದ್ದು, ಈ ವೇಳೆ ತಂಡವೊಂದು ಪ್ರದೀಪ್ ಅವರನ್ನು ರಾಡ್ ನಿಂದ ಹೊಡೆದು ಕೊಲೆಗೈದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News