ಉಳ್ಳಾಲದಲ್ಲಿ ಬೃಹತ್ ಮೀಲಾದ್ ರ್ಯಾಲಿ
Update: 2017-12-01 06:55 GMT
ಉಳ್ಳಾಲ, ಡಿ.1: ಪ್ರವಾದಿ ಮುಹಮ್ಮದ್ ನಬಿ(ಸ.)ರ ಜನ್ಮ ದಿನಾಚರಣೆಯ ಅ೦ಗವಾಗಿ ಇಂದು ಬೆಳಗ್ಗೆ ಉಳ್ಳಾಲದ ಕೋಟೆಪುರದಿ೦ದ-ಸಯ್ಯದ್ ಮದನಿ ದರ್ಗಾದ ವರೆಗೆ ಬೃಹತ್ ಮೀಲಾದ್ ರ್ಯಾಲಿ ನಡೆಯಿತು .
ರ್ಯಾಲಿಯ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಮಾತನಾಡಿ, ಸರ್ವ ಧರ್ಮಿಯರನ್ನು ಪ್ರೀತಿಯಿ೦ದ ಕ೦ಡ ಪ್ರವಾದಿ ಪ್ರೇಮ ಜಗತ್ತಿಗೆ ಮಾದರಿ, ಜನರು ಭೇದ ಭಾವವಿಲ್ಲದೆ, ದ್ವೇಷ ವನ್ನು ಬಿಟ್ಟು ಸೌಹಾರ್ದದಿಂದ ಬಾಳಬೇಕು ಎಂದು ಹೇಳಿದ್ದಾರೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ನೂರಾರು ಜನರಿದ್ದ ಮೀಲಾದ್ ರ್ಯಾಲಿಯಲ್ಲಿ ಸಚಿವ ಯು.ಟಿ ಖಾದರ್, ಇಸ್ಮಾಯಿಲ್ ಮೋನು, ಬಾವ ಮದನಿ ನಗರ, ತ್ವಾಹ ಹಾಜಿ, ಅರೇಬಿಕ್ ಟ್ರಸ್ಟ್ ಉಪಾಧ್ಯಕ್ಷ ಹಾಸಿ೦ ಅಬ್ದುಲ್ಲಾ, ಚಾರಿಟೇಬಲ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಅಬ್ಬಾಸ್ ಕೋಟೆಪುರ, ಹಮೀದ್ ಕೋಡಿ, ಆಸಿಪ್ ಮುಸ್ತಫಾ , ಫೈರೋಝ್ ಅಹ್ಮದ್ , ಕೆ.ಪಿ. ಖಾದರ್ ಮೊದಲಾದವರು ಉಪಸ್ಥಿತರಿದ್ದರು.