ಪಣೋಲಿಬೈಲು: ಮೀಲಾದ್ ಮೆರವಣಿಗೆಗೆ ಹಿಂದೂಗಳಿಂದ ಪಾನೀಯ, ಸಿಹಿತಿಂಡಿ ವಿತರಣೆ

Update: 2017-12-01 10:33 GMT

ಬಂಟ್ವಾಳ, ಡಿ.1: ಪ್ರವಾದಿ ಮುಹಮ್ಮದ್(ಸ.) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳ ಹಾಗೂ ಮುಸ್ಲಿಮ್ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿದ್ದವರಿಗೆ ಹಿಂದೂ ಬಾಂಧವರು ಸಿಹಿತಿಂಡಿ ಹಾಗೂ ಪಾನೀಯ ವಿತರಿಸಿ ಸೌಹಾರ್ದ ಮೆರೆದ ಘಟನೆ ಪಣೋಲಿಬೈಲಿನಲ್ಲಿಂದು ನಡೆದಿದೆ.

ಬೊಳ್ಳಾಯಿ ಮದ್ರಸ ವಿದ್ಯಾರ್ಥಿಗಳು, ಊರವರು ಮೀಲಾದ್ ಪ್ರಯುಕ್ತ ದಫ್ ಸಹಿತ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದರು. ಮೆರವಣಿಗೆಯು ಪಣೋಲಿಬೈಲು ದೈವಸ್ಥಾನದ ದ್ವಾರದ ಬಳಿ ತಲುಪಿದಾಗ ಸ್ಥಳೀಯ ಹಿಂದೂ ಧರ್ಮೀಯರು ಸಿಹಿತಿಂಡಿ ಹಾಗೂ ಪಾನೀಯ ವಿತರಿಸಿದರು. ಸೌಹಾರ್ದಕ್ಕೆ ಮುನ್ನುಡಿಯಾಗುವ ಇಂತಹ ಕಾರ್ಯಗಳಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News