ಅಡ್ಡೂರಿನಲ್ಲಿ ಮೀಲಾದ್ ಸಂಭ್ರಮಾಚರಣೆ

Update: 2017-12-01 19:18 GMT

ಅಡ್ಡೂರು, ಡಿ.1: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ(ಸ.)ರವರ ಜನ್ಮದಿನವನ್ನು ಇಲ್ಲಿನ ಮುಸ್ಲಿಮ್ ಬಾಂಧವರು ಸಂಭ್ರಮ, ಸಡಗರದಿಂದ ಶುಕ್ರವಾರ ಆಚರಿಸಿದರು.

ಬೆಳಗ್ಗೆ ಕೇಂದ್ರ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಮೀಲಾದುನ್ನಬಿ ಜಾಥ ಆಯೋಜಿಸಿದ್ದು, ಜಮಾತಿನ ಬಾಂಧವರು ಪಾಲ್ಗೊಂಡು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮೀಲಾದ್ ಜಾಥಕ್ಕೆ ಮೆರಗು ತುಂಬಿದರು. ಅಲ್ಲದೆ, ವಿದ್ಯಾರ್ಥಿಗಳ ದಫ್ ಕಾರ್ಯಕ್ರಮವು ಎಲ್ಲರ ನೋಡುಗರ ಕಣ್ ಸೆಳೆಯಿತು.

ತಂಪು ಪಾನೀಯ ವಿತರಣೆ: ಇನ್ನು ಮೀಲಾದುನ್ನಬಿ ಜಾಥಾದಲ್ಲಿ ಪಾಲ್ಗೊಂಡವರಿಗೆ ದಾಹ ತೀರಿಸಲು ಇಲ್ಲಿನ ಸ್ಥಳೀಯ ಎಲ್ಲ ಸಂಘ-ಸಂಸ್ಥೆಗಳ ಯುವಕರು ಒಟ್ಟು ಸೇರಿ ತಮ್ಮ ತಮ್ಮ ಭಾಗದ ಕಡೆಗಳಲ್ಲಿ ತಂಪು ಪಾನೀಯ ನೀಡಿದಲ್ಲದೆ, ಸಿಹಿ ತಿಂಡಿ, ಐಸ್ ಕ್ರೀಂ ವಿತರಿಸಿದರು.

ಸ್ಚಚ್ಛತೆಗೆ ಮಹತ್ವ: ಮೀಲಾದುನ್ನಬಿ ಜಾಥಾ ಕೊನೆಗೊಂಡ ಬಳಿಕ, ಇಲ್ಲಿನ ಕೆಲ ಯುವಕರು ಒಗ್ಗೂಡಿ ರಸ್ತೆಯ ಬದಿ ಬಿದ್ದಿದ್ದ ಪಾನೀಯಗಳ ಎಸೆದ ಲೋಟ ಹಾಗೂ ಐಸ್ಕ್ರೀಂನ ಡಬ್ಬಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬುವ ಮೂಲಕ ಸ್ಥಳೀಯರ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News