ಮುಂಡಗೋಡ: ಬಿಜೆಪಿಯಿಂದ ಪ್ರತಿಭಟನೆ

Update: 2017-12-11 08:32 GMT

ಮುಂಡಗೋಡ, ಡಿ. 11: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಾವಿಗೀಡಾದ ಪರೇಶ್ ಮೇಸ್ತಾ ಕುಟುಂಬಕ್ಕೆ ಪರಿಹಾರ ನೀಡುವುದರೊಂದಿಗೆ ಹತ್ಯೆಯ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಮುಂಡಗೋಡ ಘಟಕ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭ ತಾಲೂಕು ಬಿಜೆಪಿ ಅಧ್ಯಕ್ಷ ಗುಡ್ಡಪ್ಪಾ ಕಾತೂರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಅಶೋಕ ಚಲವಾದಿ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪೂರ, ವಿಠ್ಠಲ ಬಾಳಂಬೀಡ, ಭರತ ಹದಳಗಿ, ವಿನಾಯಕ ರಾಯ್ಕರ, ಮಹೇಶ ಹೊಸಕೊಪ್ಪ, ಚೆನ್ನಪ್ಪ ಹಿರೇಮಠ, ಸುಮನ್ ಕುಲಕರ್ಣಿ, ತಂಗಚ್ಚನ್. ವಾಯ್.ಪಿ.ಪಾಟೀಲ, ಗಿರೀಶ ಕಾತೂರ, ಡಿ.ಜೆ.ಕುಲಕರ್ಣಿ, ಗುರುರಾಜ ಕಾಮತ್, ಮಲ್ಲಿಕಾರ್ಜುನ ಗೌಳಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News