ಪತಿ ಮನೆಯವರ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆ

Update: 2017-12-12 15:17 GMT

ಶಂಕರನಾರಾಯಣ, ಡಿ.12: ಪತಿಯ ಮನೆಯವರ ಕಿರುಕುಳದಿಂದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಕ್ಲಾಡಿ ಗ್ರಾಮದ ಬಂಟ್ವಾಡಿಯ ಅಚ್ಯುತ್ ದೇವಾಡಿಗ ಮತ್ತು ಕಮಲ ದಂಪತಿ ಪುತ್ರಿ ಗೌರಿ ದೇವಾಡಿಗ (24) ಮೃತರು ಎಂದು ಗುರುತಿಸಲಾಗಿದೆ. ಅವರು ಏಳು ತಿಂಗಳ ಹಿಂದೆ ಸಿದ್ದಾಪುರ ಗ್ರಾಮದ ಮಂಗನಸಾಲುವಿನ ರಾಘವೇಂದ್ರ ದೇವಾಡಿಗ ಎಂಬವರನ್ನು ಮದುವೆಯಾಗಿದ್ದು, ಬಳಿಕ ಗೌರಿಗೆ ಆಕೆಯ ಗಂಡ, ಅತ್ತೆ ಸಾಧು, ಮೈದುನ ಮಹೇಂದ್ರ ಎಂಬವರು ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.

ಈ ಮೂವರ ಕಿರುಕುಳ ಹಾಗೂ ಹಿಂಸೆ ತಾಳಲಾರದೆ ಗೌರಿ ಡಿ.11ರಂದು ಸಂಜೆ ವೇಳೆ ಪತಿಯ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತರ ತಾಯಿ ಕಮಲ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News