ಚಲನಚಿತ್ರ ನಿರ್ಮಾಪಕ, ಸಾಹಿತಿ ದೇವಿ ಪ್ರಸಾದ್ ಪುತ್ರ ಆತ್ಮಹತ್ಯೆ

Update: 2017-12-17 07:08 GMT

ಸುಳ್ಯ, ಡಿ. 17:  ಸಂಪಾಜೆ ಗ್ರಾಮದ ಚಲನ ಚಿತ್ರ ನಿರ್ಮಾಪಕ ಮತ್ತು ಸಾಹಿತಿ ದೇವಿ ಪ್ರಸಾದ್ ಅವರ ಪುತ್ರ ವಕೀಲ ದೇವಿಚರಣ್ (39) ಅವರು ಶನಿವಾರ ತಡರಾತ್ರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಮೃತರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಈ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News