ಗುಜರಾತ್ ಚುನಾವಣೆ: ಸೋಲನುಭವಿಸಿದ ಬಿಜೆಪಿಯ ಐವರು ಸಚಿವರು

Update: 2017-12-18 16:17 GMT

ಅಹ್ಮದಾಬಾದ್,ಡಿ.18: ಈ ಸಲದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸತತ ಆರನೇ ಬಾರಿಗೆ ಅಧಿಕಾರಕ್ಕೇರುವಲ್ಲಿ ಬಿಜೆಪಿಯು ಯಶಸ್ವಿಯಾಗಿದ್ದರೂ, ಅದರ ಐವರು ಸಚಿವರು ಕಾಂಗ್ರೆಸ್ ಅಭ್ಯರ್ಥಿಗಳೆದುರು ಸೋಲನ್ನನುಭವಿಸಿದ್ದಾರೆ.

 ಗಧಾಡಾ(ಪ.ಜಾ) ಕ್ಷೇತ್ರದಲ್ಲಿ ಬಿಜೆಪಿಯ ಪ್ರಮುಖ ದಲಿತ ನಾಯಕ ಆತ್ಮಾರಾಮ ಪರಮಾರ್(60,033) ಅವರು ಕಾಂಗ್ರೆಸ್‌ನ ಪ್ರವೀಣಭಾಯಿ ಮಾರು(69,457) ಅವರೆದುರು ಮತ್ತು ಜಮೋಧಪುರ ಕ್ಷೇತ್ರದಲ್ಲಿ ಬಿಜೆಪಿಯ ಚಿಮಣಭಾಯಿ ಸಪರಿಯಾ(61,694) ಅವರು ಕಾಂಗ್ರೆಸ್‌ನ ಚಿರಾಗಭಾಯಿ ಕಲರಿಯಾ(64,212) ಅವರೆದುರು ಪರಾಭವಗೊಂಡಿದ್ದಾರೆ. ಇವರಿಬ್ಬರೂ ರೂಪಾನಿ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರು.

ವಾವ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಂಕರ ಚೌಧರಿ ಅವರು ಕಾಂಗ್ರೆಸ್ ಅಭ್ಯರ್ಥಿ ಜೆನಿಬೆನ್ ಠಾಕೂರ್ ಅವರೆದುರು ಸೋಲೊಪ್ಪಿದ್ದರೆ, ದೇವದರ ಕ್ಷೇತ್ರದಲ್ಲಿ ಕೇಶಾಜಿ ಚೌಹಾಣ್ ಅವರು ಕಾಂಗ್ರೆಸ್‌ನ ಶಿವಾಭಾಯಿ ಭುರಿಯಾರಿಂದ ಸೋಲು ಕಂಡಿದ್ದಾರೆ. ನಾಂದೋಡ್ ವಿಧಾನಸಭಾ ಕ್ಷೇತ್ರದಲಿ ಬಿಜೆಪಿಯ ಶಬ್ದಶರಣ್ ತಾಡ್ವಿ ಅವರನ್ನು ಕಾಂಗ್ರೆಸ್‌ನ ಪ್ರೇಮಸಿನ್ಹ ವಸಾವಾ ಅವರು ಪರಾಭವಗೊಳಿಸಿದ್ದಾರೆ. ಈ ಮೂವರೂ ಸಹಾಯಕ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News