ಸೆಕ್ಟರ್ ಪ್ರತಿಭೋತ್ಸವ: ‘ಅಲ್ ಮದೀನಾ’ ವಿದ್ಯಾರ್ಥಿಗಳ ಮೇಲುಗೈ

Update: 2017-12-19 06:24 GMT

ಮಂಜನಾಡಿ, ಡಿ.19: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಅಧೀನದಲ್ಲಿರುವ ದ.ಕ. ಜಿಲ್ಲೆಯ ನಾನಾ ಡಿವಿಷನ್ ವ್ಯಾಪ್ತಿಗಳಲ್ಲಿ ನಡೆದ ಸೆಕ್ಟರ್ ಮಟ್ಟದ ಪ್ರತಿಭೋತ್ಸವಗಳಲ್ಲಿ ಅಲ್-ಮದೀನಾ ದಅ್ವಾ ಕಾಲೇಜಿನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಉಪ್ಪಿನಂಗಡಿ ಡಿವಿಷನ್‌ನ ನೆಲ್ಯಾಡಿ ಸೆಕ್ಟರ್ ಪ್ರತಿಭೋತ್ಸವದ ದಅ್ವಾ ಸೀನಿಯರ್ ವಿಭಾಗದಲ್ಲಿ ಅಬ್ದುರ್ರಹ್ಮಾನ್ ವಳಾಲ್, ಉಳ್ಳಾಲ ಡಿವಿಷನ್ ಕೋಟೆಕಾರ್ ಸೆಕ್ಟರ್‌ನಲ್ಲಿ ಲಿಬಾನ್ ಕೆ.ಸಿ.ರೋಡ್, ಕೊಣಾಜೆ ಸೆಕ್ಟರ್‌ನಲ್ಲಿ ನೌಫಲ್ ಮಲಾರ್, ಮಂಜನಾಡಿ ಸೆಕ್ಟರ್‌ನಲ್ಲಿ ನೌಶಾದ್ ಕಲ್ಮಿಂಜ, ಪುತ್ತೂರು ಡಿವಿಶನ್ ಈಶ್ವರ ಮಂಗಳ ಸೆಕ್ಟರ್‌ನ ಸೀನಿಯರ್ ವಿಭಾಗದಲ್ಲಿ ಅಗದಿ ಮಂದಿರದ ಶಫೀಕ್ ಈಶ್ವರ ಮಂಗಳ ಪ್ರತಿಭೆಗಳಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಶಫೀಕ್ ಪುತ್ತೂರು ಡಿವಿಶನ್‌ನಿಂದ ಸೀನಿಯರ್ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೂ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಸಹಿತ ಎಲ್ಲ ಉಸ್ತಾದರು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News