ಜ.5: ಯುನಿವೆಫ್‌ನಿಂದ ನಿಮ್ರಾ ಮಸೀದಿಯಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮ

Update: 2018-01-03 10:31 GMT

ಮಂಗಳೂರು, ಜ.3: ಯುನಿವೆಫ್ ಕರ್ನಾಟಕ ‘ರಾಷ್ಟ್ರೀಯತೆ, ಜಾತ್ಯತೀತತೆ ಹಾಗೂ ಸ್ವಚ್ಛತೆ ಮತ್ತು ಪ್ರವಾದಿ ಮುಹಮ್ಮದ್(ಸ.)’ ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಾರ್ವಜನಿಕ ಕಾರ್ಯಕ್ರಮ ಜ.5ರಂದು ಉಳ್ಳಾಲ ಮುಕ್ಕಚ್ಚೇರಿಯ ನಿಮ್ರಾ ಮಸೀದಿಯಲ್ಲಿ ನಡೆಯಲಿದೆ.

 ಅಂದು ರಾತ್ರಿ 7:45 ಕ್ಕೆ ಜರುಗುವ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ಐಹಿಕ ಬದುಕು ಮತ್ತು ಪರಲೋಕ ಮೋಕ್ಷ’ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಇರಲಿದೆ ಎಂದು ಯುನಿವೆಫ್ ಉಳ್ಳಾಲ ಶಾಖಾಧ್ಯಕ್ಷ ಬಿ.ಎಂ.ಬದ್ರುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News