ಮೃತ ದೀಪಕ್ ಕುಟುಂಬಕ್ಕೆ 5 ಲಕ್ಷ ರೂ. ಗಾಯಾಳುವಿಗೆ 2 ಲಕ್ಷ: ವೈಯಕ್ತಿಕ ಪರಿಹಾರ ಘೋಷಿಸಿದ ಶಾಸಕ ಮೊಯ್ದಿನ್ ಬಾವಾ

Update: 2018-01-04 11:21 GMT

ಮಂಗಳೂರು, ಜ. 4: ಮೃತ ದೀಪಕ್ ರಾವ್ ಅವರ ಕುಟುಂಬಕ್ಕೆ ಹಾಗು ಚೂರಿ ಇರಿತದಿಂದ ಗಾಯಗೊಂಡ ಬಶೀರ್ ಮತ್ತು ಮುಬಶ್ಶಿರ್ ರಿಗೆ ಶಾಸಕ ಮೊಯ್ದಿನ್ ಬಾವಾ ವೈಯಕ್ತಿಕ ಪರಿಹಾರ ಘೋಷಿಸಿದ್ದಾರೆ.

ಈ ಬಗ್ಗೆ ಶಾಸಕ ಮೊಯ್ದಿನ್ ಬಾವಾ ತನ್ನ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ದೀಪಕ್ ರಾವ್ ಕುಟುಂಬಕ್ಕೆ 5 ಲಕ್ಷ ರೂ., ಗಾಯಾಳು ಬಶೀರ್ ರಿಗೆ 2 ಲಕ್ಷ ರೂ., ಮತ್ತು ಮುಬಶ್ಶಿರ್ ರಿಗೆ 50 ಸಾವಿರ ರೂ. ವೈಯಕ್ತಿಕ ಪರಿಹಾರ ಘೋಷಿಸಿದ್ದಾರೆ.

ದೀಪಕ್ ಸಹೋದರನಿಗೆ ಕಿವಿ ಕೇಳುವುದಿಲ್ಲ ಆದ್ದರಿಂದ ಸರಕಾರದಿಂದ ಸಿಗುವ ಸೌಲಭ್ಯ, ಖಾಸಗಿ ಕಂಪೆನಿಯಲ್ಲಿ ಕೆಲಸ ನೀಡಲು ಬದ್ಧ ಎಂದು ಹೇಳಿದ ಅವರು, ಪೊಲೀಸರ ಸೂಚನೆಯ ಮೇರೆಗೆ ಇಂದು ಶವಸಂಸ್ಕಾರಕ್ಕೆ ಹೋಗಿಲ್ಲ ಎಂದು ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News