ಕೋಟಿ ಚೆನ್ನಯರನ್ನು ಅಸ್ಪೃಶ್ಯರಾಗಿಸುವ ಹುನ್ನಾರ

Update: 2018-01-12 17:59 GMT

ಮಾನ್ಯರೇ

ದಲಿತ- ಹಿಂದುಳಿದ ವರ್ಗದ ಪೂಜನೀಯರಾದ ಅಂಬೇಡ್ಕರ್, ನಾರಾಯಣಗುರುಗಳನ್ನು ಮತಗಳಿಕೆಗಾಗಿ ಸಂದರ್ಭಕ್ಕೆ ತಕ್ಕಹಾಗೆ ಬಳಸಿ ಅವರ ಹಿಂಬಾಲಕರನ್ನು ಉಪೇಕ್ಷಿಸುವ ಮನುವಾದದ ಸಮರ್ಥಕ ಪಕ್ಷವು ಇದೀಗ ಕರಾವಳಿಯ ಜನತೆ ಪಕ್ಷಾತೀತವಾಗಿ ಗೌರವಿಸುವ ಅವಳಿ ವೀರರಾದ ಕೋಟಿ ಚೆನ್ನಯರ ಹಿಂದೆ ಬಿದ್ದು ಅವರ ಭಾವಚಿತ್ರವನ್ನು ತಮ್ಮ ಪಕ್ಷದ ಬ್ಯಾನರ್‌ನಲ್ಲಿ ಬಳಸಿಕೊಂಡಿದ್ದು ಖಂಡನೀಯ.

ಕೋಟಿ ಚೆನ್ನಯರು ತುಳುನಾಡಿನಲ್ಲಿ ಪ್ರಭುತ್ವದ ಶೋಷಣೆಯ ವಿರುದ್ಧ ಹೋರಾಡಿದವರು. ಅಲ್ಲದೆ ಅವರೆಂದೂ ಅಧಿಕಾರಕ್ಕಾಗಿ ಹಾತೊರೆದು ದುರ್ಮಾರ್ಗಕ್ಕಿಳಿದವರಲ್ಲ. ಸತ್ಯ- ನ್ಯಾಯದ ಮಾರ್ಗದಲ್ಲಿ ಮುನ್ನಡೆದುದರಿಂದಲೇ ಅವರಿಂದು ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.

ರಾಮ, ಆಂಜನೇಯರನ್ನು ತಮ್ಮ ಪಕ್ಷದ ಅಡಿಯಾಳಾಗಿಸಿ ಅವರ ಮೇಲಿನ ಗೌರವ ಕಳೆಯುವಲ್ಲಿ ಮಹತ್ತರ ಪಾತ್ರ ವಹಿಸಿರುವ ಇವರು ಈಗ ತುಳುನಾಡಿನ ಕೋಟಿಚೆನ್ನಯರನ್ನು ತಮ್ಮ ಪಕ್ಷಕ್ಕೆ ಬಳಸಿಕೊಂಡು ಅವರನ್ನು ಅಸ್ಪಶ್ಯರನ್ನಾಗಿಸಲು ಪ್ರಯತ್ನಿಸುತ್ತಿರುವುದನ್ನು ತುಳುನಾಡಿನ ಜನತೆ ಖಂಡಿತ ಸಹಿಸುವುದಿಲ್ಲ.

-ಕೆ. ಎನ್. ಕೋಟ್ಯಾನ್,

Writer - -ಕೆ. ಎನ್. ಕೋಟ್ಯಾನ್,

contributor

Editor - -ಕೆ. ಎನ್. ಕೋಟ್ಯಾನ್,

contributor

Similar News