ಉಡುಪಿ: ಬ್ರಾಹ್ಮಣ ಮಹಾಸಭಾದಿಂದ ವಿಷ್ಣು ಸಹಸ್ರನಾಮ ಪಾರಾಯಣ

Update: 2018-01-13 16:28 GMT

ಉಡುಪಿ, ಜ.13: ತಾಲೂಕು ಬ್ರಾಹ್ಮಣ ಮಹಾಸಭಾದ 32 ವಲಯ ಹಾಗೂ ಇತರ ಎಲ್ಲಾ ಬ್ರಾಹ್ಮಣ ವರ್ಗಗಳ ಸಹಯೋಗದಲ್ಲಿ ಮಕರ ಸಂಕ್ರಾಂತಿಯ ಪರ್ವಕಾಲ ಜ.14ರಂದು ನವೀಕರಣಗೊಂಡ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪ್ರಥಮ ಧಾರ್ಮಿಕ ಕಾರ್ಯಕ್ರಮವಾಗಿ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಬೆಳಗ್ಗೆ 8:30 ರಿಂದ 11 ಗಂಟೆಯ ವರೆಗೆ ನಡೆಯಲಿದೆ.

ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಹಾಗೂ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ.ಮಂಜುನಾಥ ಉಪಾಧ್ಯ ಈ ವಿಷಯ ತಿಳಿಸಿದರು.

ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಸಂಕಲ್ಪ ಹಾಗೂ ಬಯಕೆಯಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಬ್ರಾಹ್ಮಣ ಸಮಾಜದ ಎಲ್ಲಾ ವರ್ಗಗಳ ವಿಪ್ರಕರಎು ಮತ್ತು ಮಹಿಳೆಯರು ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಕೊರಂಗ್ರಪಾಡಿಯ ಪಾವನ ಪರಿಷತ್‌ನ ನೇತೃತ್ವದಲ್ಲಿ ಕೊರಂಗ್ರಪಾಡಿಯ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ರವಿವಾರ ಬೆಳಗ್ಗೆ 6:30 ರಿಂದ ಸಂಜೆ 6 ರ ವರೆಗೆ ನಡೆಯುವ ಶ್ರೀವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಎಲ್ಲರೂ ಭಾಗವಹಿಸುವಂತೆ ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದ ಪದಾಧಿಕಾರಿ ಗಳಾದ ಕೆ.ವೆಂಕಟರಮಣ ಭಟ್, ಶಾಂತಾರಾಮ್ ಭಟ್, ಕೆ.ಶ್ರೀಕಾಂತ ಉಪಾದ್ಯ, ಎಂ.ಶ್ರೀನಿವಾಸ ಬಲ್ಲಾಳ್ ಹಾಗೂ ಕೆ.ರಾಮದಾಸ ಉಡುಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News