ಮಟ್ಕಾ: ನಾಲ್ವರ ಬಂಧನ

Update: 2018-01-13 16:41 GMT

ಉಡುಪಿ, ಜ.13: ಮಟ್ಕಾ ಜುಗಾರಿಗೆ ಸಂಬಂಧಿಸಿ ಜ.12ರಂದು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಮಟಪಾಡಿಯ ಮಂಜುನಾಥ(42) ಎಂಬಾತ ನನ್ನು 2,320 ನಗದು ಸಹಿತ ಹಾಗೂ ಅಲೆವೂರು ಗ್ರಾಮದ ಸಂಜೀವ ದೇವಾಡಿಗ(62) ಎಂಬಾತನನ್ನು 2,180ರೂ. ನಗದು ಸಹಿತ ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಅದೇ ರೀತಿ ಪುತ್ತೂರು ಗ್ರಾಮದ ನಿಟ್ಟೂರು ಧೂಮಾವತಿ ದೇವಸ್ಥಾನದ ಬಳಿ ನಿಟ್ಟೂರಿನ ಸೋಮನಾಥ (35) ಎಂಬಾತನನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಬಸ್ ನಿಲ್ದಾಣದ ಬಳಿ ಜ.11ರಂದು ಕಟಪಾಡಿಯ ಹರೀಶ ದೇವಾಡಿಗ(42) ಎಂಬಾತನನ್ನು ಕಾಪು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News