ಬೊಫೋರ್ಸ್‌ ಪ್ರಕರಣ: ದೂರುದಾರರ ‘ಅಧಿಕಾರ ಸ್ಥಾನ’ ಪ್ರಶ್ನಿಸಿದ ಸುಪ್ರೀಂಕೋರ್ಟ್

Update: 2018-01-16 16:47 GMT

ಹೊಸದಿಲ್ಲಿ, ಜ. 16: ಬೊಫೋರ್ಸ್‌ ಪ್ರಕರಣದಲ್ಲಿ ಮನವಿ ಸಲ್ಲಿಸುವಲ್ಲಿ ಅಜಯ್ ಅಗರ್‌ವಾಲ್ ಅವರ ‘ಅಧಿಕಾರ ಸ್ಥಾನ’ ಏನು ಎಂದು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಪ್ರಶ್ನಿಸಿದೆ.ಪ್ರಕರಣಕ್ಕೆ ಸಂಬಂಧಿಸಿದ ಮೂರನೇ ವ್ಯಕ್ತಿಗೆ ಅನುಮತಿ ನೀಡುವುದು ಕಾನೂನಿಗೆ ವಿರುದ್ಧವಾದುದು ಎಂದು ಕೂಡ ನ್ಯಾಯಾಲಯ ಹೇಳಿದೆ.

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 2ಕ್ಕೆ ನಿಗದಿಗೊಳಿಸಿದೆ.ಬಿಜೆಪಿಯ ನಾಯಕರೂ ಆಗಿರುವ ಅಗರ್‌ವಾಲ್ 64 ಕೋ. ರೂಪಾಯಿಯ ಬೊಫೋರ್ಸ್‌ ಪ್ರಕರಣದ ತ್ವರಿತ ವಿಚಾರಣೆ ನಡೆಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

ಯುರೋಪ್ ಮೂಲದ ಹಿಂದುಜಾ ಸಹೋದರರ ವಿರುದ್ಧದ ಎಲ್ಲ ಆರೋಪವನ್ನು ರದ್ದುಗೊಳಿಸಿದ ದಿಲ್ಲಿ ಉಚ್ಚ ನ್ಯಾಯಾಲಯದ 2005ರ ತೀರ್ಪನ್ನು ಅಜಯ್ ಅಗರ್‌ವಾಲ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News