ಮಂಗಳೂರು: ರಾಜ್ಯ ಸರಕಾರಿ ನೌಕರರ ಸಂಘದಿಂದ ಧರಣಿ

Update: 2018-01-18 11:46 GMT

ಮಂಗಳೂರು, ಜ.18: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘದ ದ.ಕ. ಜಿಲ್ಲಾ ಸಮಿತಿಯು ಗುರುವಾರ ದ.ಕ‌. ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು. 

ಕೇಂದ್ರ ಸರಕಾರವು 2004ರಲ್ಲಿ ಜಾರಿಗೊಳಿಸಿರುವ ಎನ್ ಪಿ ಎಸ್ ಯೋಜನೆಯಿಂದ ಸರಕಾರಿ ನೌಕರರು ಅತಂತ್ರರಾಗಿದ್ದಾರೆ. ಹಾಗಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಸಂಘದ ಮುಖಂಡರಾದ ಪ್ರಕಾಶ್ ನಾಯಕ್, ಜಯರಾಮ ಪೂಜಾರಿ, ರೀಟಾ ಡೇಸಾ, ಶಿವಶಂಕರ್ ಭಟ್, ಅಕ್ಷಯ್ ಭಂಡಾರ್ಕರ್, ಪಿ.ಕೆ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News