ಗೋಳ್ತಮಜಲು ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟ: ಡಿವಿಶ್ ಸ್ಟಾರ್ಸ್‌ ಪ್ರಥಮ

Update: 2018-01-18 09:40 GMT

ಬಂಟ್ವಾಳ, ಜ. 18: ಗೋಳ್ತಮಜಲು ಸೌಹಾರ್ದ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಗೋಳ್ತಮಜಲು ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟವು ಮದಕ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಅತೀ ಹೆಚ್ಚು ಜನಪ್ರೀಯತೆಯನ್ನು ಗಳಿಸುತ್ತಿರುವ ಕಬಡ್ಡಿ ಪಂದ್ಯಾಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕಿಗೆ ಮ್ಯಾಟೆಡ್ ಕ್ರೀಡಾಂಗಣದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕುಲಾಲ್ ನೆಟ್ಲ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮಾಜಿ ಸದಸ್ಯ ಝಕರಿಯಾ ಕಲ್ಲಡ್ಕ, ಹಮೀದ್ ಗೋಳ್ತಮಜಲು, ತಾಪಂ ಮಾಜಿ ಸದಸ್ಯೆ ಐಡಾ ಸುರೇಶ್, ಕಲ್ಲಡ್ಕ ಯುವ ಕಾಂಗ್ರೆಸ್‌ನ ಸದಸ್ಯ ಜಿ.ಎಸ್.ಸಿದ್ದೀಕ್, ನಝೀರ್ ಬಲ್ಲೆಕೋಡಿ, ಎಸ್‌ಡಿಪಿಐ ಜಿಲ್ಲಾ ಸದಸ್ಯ ಅಬ್ದುಲ್ ಸತ್ತಾರ್, ಪತ್ರಕರ್ತ ಲತೀಫ್ ನೇರಳಕಟ್ಟೆ, ರಝಾಕ್, ಶಿಹಾಬ್, ಸಿದ್ದೀಕ್ ಗೋಳ್ತಮಜಲು, ಸತ್ತಾರ್, ಕೆ.ಕೆ.ಶಹೀದ್, ಮುಝಮ್ಮಿಲ್ ಕಲ್ಲಡ್ಕ, ಇರ್ಷಾದ್ ಕಲ್ಲಡ್ಕ, ಝೈದ್ ಮುರಬೈಲು, ಉಝೈಫ್ ಮದಕ, ಇಮ್ರಾನ್, ಕಾಮಿಲ್ ಮಾಣಿ, ಫೈಝಲ್, ಫಾರೂಕ್ ಕಲ್ಲಡ್ಕ, ಸಮದ್, ಝೈದ್ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಫಾರೂಕ್ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು. ಸೌಹಾರ್ದ ಫ್ರೆಂಡ್ಸ್ ಅಧ್ಯಕ್ಷ ಇರ್ಫಾನ್ ಗೋಳ್ತಮಜಲು ಸ್ವಾಗತಿಸಿ, ಕಾರ್ಯದರ್ಶಿ ಬಾತಿಶ್ ವಂದಿಸಿ, ಅಶ್ರಫ್ ನಿರೂಪಿಸಿದರು.

ಡಿವಿಶ್ ಸ್ಟಾರ್ಸ್‌ ತಂಡ ಪ್ರಥಮ, ಅಮ್ಟೂರು ರೆಡ್ ಹಾರ್ಸಸ್ ತಂಡವು ದ್ವಿತೀಯ ಪಡೆದುಕೊಂಡಿತು. ಡಿವಿಶ್ ತಂಡದ ಸಫ್ವಾನ್, ನಿಝಾಮ್, ಅಮ್ಟೂರು ತಂಡದ ಶಮೀರ್ ಅವರು ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.

ಅಶ್ರಫ್-ಅಸುರು ಮಾಲಕತ್ವದ ಟಿಕ್ಕಾ ಪಾಯಿಂಟ್ ಕಲ್ಲಡ್ಕ, ಕಾಸಿಂ ಮಾಲಕತ್ವದ ಡಿವಿಶ್ ಸ್ಟಾರ್, ಶರೀಫ್ ಅಮ್ಟೂರು ಮಾಲಕತ್ವದ ಝಡ್ ಬಿ ಬಲ್ಲೆಕೋಡಿ, ಸಿದ್ದೀಕ್ ಮಾಲಕತ್ವದ ಮುರಬೈಲು ಟೈಗರ್ಸ್‌, ಶಿಹಾಬ್ ಮಾಲಕತ್ವದ ಗೋಲ್ಡನ್ ರೈಡರ್ಸ್‌ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News