ಯುವತಿಯ ಅಪಹರಣ ಪ್ರಕರಣ: ಬಜರಂಗದಳ ಮುಖಂಡನ ಸೆರೆ

Update: 2018-01-18 18:41 GMT

ಮಂಗಳೂರು, ಜ.18: ಯುವತಿಯೊಬ್ಬಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಮುಖಂಡನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿ ಕರೆದೊಯ್ದಿರುವುದಾಗಿ ತಿಳಿದುಬಂದಿದೆ.

ಬಜರಂಗದಳದ ಮುಖಂಡ ಸುನೀಲ್ ಪಂಪ್‌ವೆಲ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಮಂಗಳೂರಿನಲ್ಲಿ ಕಲಿಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮುಂಬೈಯ ಯುವಕ ಇಕ್ಬಾಲ್ ಎಂಬಾತನನ್ನು ಪ್ರೇಮಿಸಿ ವಿವಾಹವಾಗಿ ಮುಂಬೈಯಲ್ಲಿದ್ದಳೆನ್ನಲಾಗಿದೆ. ಈ ಅಂತರ್ ಧರ್ಮೀಯ ಪ್ರೇಮ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಆರೋಪಿಸಿ ಯುವತಿಯ ಕುಟುಂಬಸ್ಥರು ಆಕೆಯನ್ನು ಮುಂಬೈಯಿಂದ ಮಂಗಳೂರಿಗೆ ಕರೆ ತಂದಿದ್ದರು.

ಈ ವಿಚಾರವಾಗಿ ಇಕ್ಬಾಲ್ ಮುಂಬೈ ನ್ಯಾಯಾಲಯಕ್ಕೆ ಹೇಬಿಯರ್ಸ್ ಕಾರ್ಪಸ್ ಅರ್ಜಿ ಸಲ್ಲಿಸಿ ತನ್ನ ಪತ್ನಿಯ ಅಪಹರಣವಾಗಿದ್ದು, ಆಕೆಯನ್ನು ಪತ್ತೆ ಹಚ್ಚಿ ಕೊಡುವಂತೆ ಕೋರಿದ್ದರು. ಈ ದೂರಿನ ಅನ್ವಯ ಮಂಗಳೂರಿಗೆ ಆಗಮಿಸಿದ ಮುಂಬೈ ಪೊಲೀಸರು ಸುನೀಲ್ ಪಂಪ್‌ವೆಲ್ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News