'ಈ ಬಾರಿಯ ಚುನಾವಣೆ ಅಲ್ಲಾಹು - ಶ್ರೀರಾಮನ ನಡುವಿನ ಸ್ಪರ್ಧೆ'

Update: 2018-01-23 08:22 GMT

ಬಂಟ್ವಾಳ, ಜ. 23: ಈ ಬಾರಿಯ ಬಂಟ್ವಾಳ ವಿಧಾನ ಸಭಾ ಚುನಾವಣೆಯು ಅಲ್ಲಾಹನ ಮತ್ತು ಶ್ರೀರಾಮನ ನಡುವಿನ ಸ್ಪರ್ಧೆಯಾಗಿದೆ ಎಂದು ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.

ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುಂದಾಳತ್ವದಲ್ಲಿ ಜ.14ರಂದು ಆರಂಭವಾದ  ಬಂಟ್ವಾಳದ ಪರಿವರ್ತನೆಗೆ 'ಗ್ರಾಮದೆಡೆಗೆ ಬಿಜೆಪಿ ನಡಿಗೆ'ಯ 9ನೆ ದಿನವಾದ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.

ಈ ಬಾರಿಯ ಬಂಟ್ವಾಳ ವಿಧಾನ ಸಭಾ ಚುನಾವಣೆಯು ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನಡುವಿನ ಸ್ಪರ್ಧೆಯಲ್ಲ. ಇದು ಅಲ್ಲಾಹನ ಮತ್ತು ಶ್ರೀರಾಮನ ನಡುವಿನ ಸ್ಪರ್ಧೆಯಾಗಿದೆ. ಬಂಟ್ವಾಳದ ಜನರು ಅಲ್ಲಾಹನನ್ನ ಮತ್ತೆ ಮತ್ತೆ ಗೆಲ್ಲಿಸುತ್ತೀವಾ? ಅಥವಾ ಶ್ರೀರಾಮನನ್ನ ಪ್ರೀತಿಸುವವರನ್ನ ಗೆಲ್ಲಿಸುತ್ತೀವಾ?. ಎಂಬುವುದನ್ನು ನೀವೇ ನಿರ್ಧಾರ ಮಾಡಬೇಕು ಎಂದು ಹೇಳಿದರು.

ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉಪಸ್ಥಿತರಿದ್ದು, ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News