ರಸ್ತೆ ಅಪಘಾತ: ನೆರವಿಗೆ ಧಾವಿಸಿದ ಶಾಸಕ ಮೊಯ್ದಿನ್ ಬಾವ

Update: 2018-01-23 08:09 GMT

ಮಂಗಳೂರು, ಜ. 23: ಉಡುಪಿಯಿಂದ ಮಂಗಳೂರು ಕಡೆಗೆ ಪಡೀಲ್ ಸಮೀಪದ ದಂಪತಿ ಕಾರಿನಲ್ಲಿ ಸೋಮವಾರ ಮಧ್ಯರಾತ್ರಿ ಪ್ರಯಾಣಿಸುತ್ತಿದ್ದಾಗ ಕೂಳೂರ್ - ಕುದುರೆಮುಖ ಬಳಿ ರೈಲ್ವೆ ಗೇಟ್ ಗೆ ಕಾರು ಢಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. 

ಅಪಘಾತದಿಂದ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಅಸಹಾಯಕರಾಗಿದ್ದು, ಈ ಸಂದರ್ಭ ಕಾರ್ಯಕ್ರಮಗಳನ್ನು ಮುಗಿಸಿ ಬರುತ್ತಿದ್ದ ಮಂಗಳೂರು ಉತ್ತರ ಕ್ಷೇತ್ರದ  ಶಾಸಕ ಮೊಯ್ದಿನ್ ಬಾವ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ನಂತರ ಪೊಲೀಸ್ ಅಧಿಕಾರಿಗಳು ಹಾಗೂ ಎಂಸಿಎಫ್ ಮುಖ್ಯಸ್ಥರನ್ನು ಕರೆಸಿ ಗಾಯಾಳುಗಳಿಗೆ ಬೇಕಾಗುವ ಎಲ್ಲ ವ್ಯವಸ್ಥೆ  ಮಾಡಿಸಿದರು.

ಅಪಘಾತ ನಡೆದು ಗಾಯಗೊಂಡಿದ್ದರೂ ಶಾಸಕರು ಬರುವ ಮೊದಲೂ ಯಾರೂ ಸಹಾಯ ಮಾಡಲಿಲ್ಲ ಎಂದು ಗಾಯಾಳುಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News