ಅಂಬಲಪಾಡಿ: ಅಪರಿಚಿತರಿಂದ ಯುವತಿಯ ಸುಲಿಗೆ
Update: 2018-01-23 18:33 GMT
ಉಡುಪಿ, ಜ.23: ಮೂವರು ಅಪರಿಚಿತರು ಯುವತಿಯೊಬ್ಬಳಿಗೆ ಹಲ್ಲೆ ನಡೆಸಿ ಮೊಬೈಲ್ ಹಾಗೂ ನಗದು ಇದ್ದ ಬ್ಯಾಗ್ ಸುಲಿಗೆ ಮಾಡಿರುವ ಘಟನೆ ಜ.22ರಂದು ಅಂಬಲಪಾಡಿಯಲ್ಲಿ ನಡೆದಿದೆ.
ಅಂಬಲಪಾಡಿಯ ರಂಗನಾಥ್ ಎಂಬವರ ಪುತ್ರಿ ರಜನಿ (20) ಎಂಬಾಕೆ ಅಂಬಲಪಾಡಿ ಪೆಟ್ರೋಲ್ ಬಂಕ್ ರಸ್ತೆಯ ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ರಜನಿಯ ಬಾಯನ್ನು ಎಳೆದು ಕೊಂಡು ಹೋದ ಎನ್ನಲಾಗಿದೆ. ಅಲ್ಲಿಗೆ ಬಂದ ಮತ್ತಿಬ್ಬರು ಆಕೆಯ ಕೈಯಲ್ಲಿದ್ದ ಮೊಬೈಲ್ ಹಾಗೂ 4,500 ರೂ. ಹಣ ಇದ್ದ ಬ್ಯಾಗನ್ನು ಕಿತ್ತು, ಹಲ್ಲೆ ಮಾಡಿ ನಂತರ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
ಹಲ್ಲೆಗೊಳಗಾದ ರಜನಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.