ಕೋಡಿ ಬ್ಯಾರೀಸ್‌ನಲ್ಲಿ ಗಣರಾಜ್ಯೋತ್ಸವ

Update: 2018-01-26 12:35 GMT

ಕುಂದಾಪುರ, ಜ.26: ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವೇದಿಕೆಯಲ್ಲಿ 69ನೇ ಗಣರಾಜ್ಯೋತ್ಸವ ಆಚರಣೆ ಜರುಗಿತು. ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯ ಕೆ.ಎಂ.ಅಬ್ದುಲ್‌ರಹ್ಮಾನ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಬ್ಯಾರೀಸ್‌ನ ವಿವಿಧ ಅಂಗಸಂಸ್ಥೆಗಳ ಸಲಹಾ ಮಂಡಳಿ ಸದಸ್ಯರಾದ ಮಾಧವ ಎಂ. ಪೂಜಾರಿ, ಅಬಿಷೇಕ್, ಶಂಕರ ಪೂಜಾರಿ, ಭಾಸ್ಕರ್ ಪುತ್ರನ್, ಪ್ರಕಾಶ್, ಅಬ್ದುಲ್ಲಾ ಕೋಡಿ, ರಫೀಕ್ ಹಾಗೂ ಬ್ಯಾರೀಸ್ ವಿವಿಧ ಶೈಕ್ಷಣಿಕ ಅಂಗಸಂಸ್ಥೆಗಳ ಮುಖ್ಯಸ್ಥರಾದ ಸಿದ್ದಪ್ಪ ಕೆ.ಎಸ್., ಡಾ.ಶಮೀರ್, ಫಿರ್ದೌಸ್, ಜಯಂತಿ, ರೇಷ್ಮಾ ಡಿಸೋಜ, ರೆಹನಾ ಬೇಗಂ ಮತ್ತು ಸುಮಿತ್ರಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರೇಣುಕಾ ಗೊಂಡಿ ‘ವಿದ್ಯಾರ್ಥಿ ಕಂಡ ಭಾರತ’ ಕುರಿತು ಮಾತನಾಡಿದರು. ಉಪನ್ಯಾಸಕ ಸಂದೀಪ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶ್ವೇತಾ ಸ್ವಾಗತಿಸಿದರು. ಶಿಕ್ಷಕ ಸಂತೋಷ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News