ಗಾಂಜಾ ಸೇವನೆ: ಐವರು ವಶಕ್ಕೆ

Update: 2018-02-02 18:43 GMT

ಮಂಗಳೂರು, ಫೆ. 2: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಉರುಮನೆ ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆ.ಸಿ.ರೋಡ್ ಜಂಕ್ಷನ್‌ನ ಮುನಾವರ್ ಯಾನೆ ಮುನೀರ್, ಕುತ್ತಾರ್‌ನ ಮುಹಮ್ಮದ್ ಶುಕೂರ್, ಕೋಟೆಪುರದ ಮುಹಮ್ಮದ್ ಅಫ್ವಾನ್, ಹರೇಕಳದ ಸವಾದ್ ಮತ್ತು ಹಿಲರಿಯ ನಗರದ ಸದಖತುಲ್ಲಾ ಹಿಲರಿಯ ನಗರ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ದೃಢಪಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ದಕ್ಷಿಣ ಉಪ-ವಿಭಾಗದ ಎ.ಸಿ.ಪಿರವರ ನೇತೃತ್ವದಲ್ಲಿ, ಕೊಣಾಜೆ ಪೊಲೀಸ್ ನಿರೀಕ್ಷಕ ಅಶೋಕ್ ಪಿ., ಪಿ.ಎಸ್.ಐ. ರವಿ ಪೀರು ಪವಾರ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News