ಇ -ವೇಬಿಲ್‌ಗೆ ವಿರೋಧ: ಬಂದರ್‌ನಲ್ಲಿ ಎರಡು ತಾಸು ಅಂಗಡಿಮುಂಗಟ್ಟು ಬಂದ್ ಮಾಡಿದ ವರ್ತಕರು

Update: 2018-02-03 07:52 GMT

ಮಂಗಳೂರು, ಫೆ.3: ಸರಕು ಸಾಗಣೆಗೆ ಸಂಬಂಧಿಸಿ ಕೇಂದ್ರ ಸರಕಾರ ಫೆ.1ರಿಂದ ಜಾರಿಗೊಳಿಸಿರುವ ಇ -ವೇಬಿಲ್‌ಗೆ ವಿರೋಧ ವ್ಯಕ್ತಪಡಿಸಿ ನಗರದ ಬಂದರಿನ ವರ್ತಕರು ಎರಡು ಗಂಟೆ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸಿದರು.

ಮಂಗಳೂರು ಮಂರ್ಚೆಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಅಂಗಡಿಗಳನ್ನು ಮುಚ್ಚಿದ ವರ್ತಕರ ನಿಯೋಗವು ಬಳಿಕ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕರನ್ನು ಭೇಟಿಯಾಗಿ ಚರ್ಚಿಸಿ ಇ -ವೇಬಿಲ್‌ಗೆ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.

ನಿಯೋಗದಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷ ಅಹ್ಮದ್ ಬಾವ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕೋಡಿಜಾಲ್, ಎಪಿಎಂಸಿ ಸದಸ್ಯ ರಾಘವ ಶೆಟ್ಟಿ, ಹಿರಿಯ ವರ್ತಕರಾದ ಇಸ್ಮಾಯೀಲ್, ಅಹ್ಮದ್ ಬಾವ ಯುಎಸ್‌ಎ, ಆಸಿಫ್ ಕೆಎಂಎಸ್, ಮುಹಮ್ಮದ್ ಆಝಾದ್, ಅನ್ಸಾರ್ ಬಿಳಿಯಾರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News