ಮಾ.4ರಂದು ಕಜೆ-ನಿಂತಿಕಲ್ಲು ನೂತನ ಮಸೀದಿ ಕಟ್ಟಡದ ಉದ್ಘಾಟನೆ
Update: 2018-02-03 12:21 GMT
ಸುಳ್ಯ, ಫೆ.3: ತಾಲೂಕಿನ ಕಜೆ-ನಿಂತಿಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಸೀದಿ ಕಟ್ಟಡದ ಉದ್ಘಾಟನಾ ಸಮಾರಂಭವು ಮಾ.4ರಂದು ಸಂಜೆ ಶೈಖುನಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉಸ್ತಾದರ ನೇತೃತ್ವದಲ್ಲಿ ನಡೆಯಲಿದೆ.
ಈ ಪ್ರಯುಕ್ತ 2 ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಮಾ.2ರಂದು ಮುಳ್ಳೂರುಕರೆ ಮುಹಮ್ಮದಾಲಿ ಸಖಾಫಿ, ಮಾ.3ರಂದು ಯಾಸೀನ್ ಜೌಹರಿ ಕೊಲ್ಲಂ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಅಸ್ಸೈಯದ್ ಫಝಲ್ಕೋಯಮ್ಮ ತಂಙಲ್ ಕೂರತ್, ಅಸ್ಸೈಯದ್ ಝೈನುಲ್ ಆಬಿದೀನ್ ತಂಙಲ್ ಎಣ್ಮೂರು ಮುಚ್ಚಿಲ ದುಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅನೇಕ ಉಲಮಾ, ಉಮರಾ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.