'ರಾಣಿ ಅಬ್ಬಕ್ಕ ಪ್ರಶಸ್ತಿ'ಗೆ ಮಂಗಳೂರಿನ ಸಮಾಜ ಸೇವಕಿ ಖೈರುನ್ನಿಸಾ ಸೈಯದ್ ಆಯ್ಕೆ
Update: 2018-02-08 09:52 GMT
ಮಂಗಳೂರು, ಫೆ. 8: ರಾಣಿ ಅಬ್ಬಕ್ಕ ಪ್ರಶಸ್ತಿಗೆ ಮಂಗಳೂರಿನ ಸಮಾಜ ಸೇವಕಿ ಖೈರುನ್ನಿಸಾ ಸೈಯದ್ ಅವರು ಆಯ್ಕೆಯಾಗಿದ್ದಾರೆ.
ಪ್ರಾಮಾಣಿಕ ಸಮಾಜಸೇವೆಗಾಗಿ ಖೈರುನ್ನಿಸಾ ಸೈಯದ್ ಅವರು ರಾಣಿ ಅಬ್ಬಕ್ಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವ ಸಮಿತಿ ತಿಳಿಸಿದೆ.
ಉದ್ಯಮಿ, ಸಮಾಜ ಸೇವಕ ಸೈಯದ್ ಭಾಯ್ ಎಂದೇ ಚಿರಪರಿಚಿತರಾಗಿದ್ದ ದಿವಂಗತ ಸೈಯದ್ ಮುಹಮ್ಮದ್ ಕುಲಶೇಖರ ಅವರ ಪತ್ನಿ ಖೈರುನ್ನಿಸಾ ಸೈಯದ್ ಅವರು ವಿವಿಧ ಸಮಾಜ ಸೇವಾ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದಾರೆ.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಫೆ. 10 ರಿಂದ 12ರ ವರೆಗೆ ನಡೆಯಲಿರುವ ಉಳ್ಳಾಲ್ ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.