ಸಿಎ ಅಬ್ದುಲ್ಲ ಮಾದುಮೂಲೆ ಅವರಿಗೆ ಸನ್ಮಾನ

Update: 2018-02-13 09:26 GMT

ಪೆರ್ಲ, ಫೆ.13: ಅಡ್ಕಸ್ಥಳ ಜಮಾಅತ್‌ಗೊಳಪಟ್ಟ ಮಸೀದಿ ಮತ್ತು ಮದ್ರಸದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿರುವ ಜಮಾಅತ್ ಸಮಿತಿಯ ಅಧ್ಯಕ್ಷ ಸಿ. ಎ ಅಬ್ದುಲ್ಲ ಮಾದುಮೂಲೆ ಅವರನ್ನು ಸೋಮವಾರ ರಾತ್ರಿ ಅಡ್ಕಸ್ಥಳ ಬದ್ರಿಯಾ ನಗರದಲ್ಲಿ ನಡೆದ ಮಶ್ಹೂರ್ ವಲಿಯುಲ್ಲಾಹಿ (ರ.ಅ) ದರ್ಗಾಶರೀಫ್‌ನ ಉರೂಸ್‌ನ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
  ಮುಖ್ಯ ಪ್ರವಚನ ನೀಡಿದ ಸಿಂಸಾರುಲ್ ಹಖ್ ಹುದವಿ ಅಬುದಾಬಿ ಅವರು ಅಬ್ದುಲ್ಲ ಮಾದುಮೂಲೆ ಅವರನ್ನು ಟಿಐವೈಸಿ ಜಿಸಿಸಿ ಸಮಿತಿಯ ಪರವಾಗಿ ಸನ್ಮಾನಿಸಿದರು.
   ಅಡ್ಕಸ್ಥಳ ಮುದರ್ರಿಸ್ ಅಬ್ದುಲ್ ರಝಾಕ್ ಮಿಸ್ಬಾಹಿ ಬಾಯಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಡ್ಕಸ್ಥಳ ಜಮಾಅತ್ ಸಮಿತಿಯ ಗೌರವಾಧ್ಯಕ್ಷ ಮೀರ್ ಝಾಹೀದ್ ತಂಙಳ್ ಮಂಜೇಶ್ವರ, ಎಪಿ ಅಬ್ದುಲ್ ಹಮೀದ್ ಫೈಝಿ, ಮುಹಮ್ಮದ್ ಶಾಫಿ ಅನ್ವರಿ ಚೆರ್ಪುಳಶ್ಶೇರಿ, ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಕೂರ್ನಡ್ಕ , ಶಮೀರ್ ಸಖಾಫಿ ಸದರ್ ಮುಅಲ್ಲಿಂ ಅಡ್ಕಸ್ಥಳ, ಜಿಸಿಸಿ ಸಮಿತಿಯ ಆರ್.ಎಂ.ಅಶ್ರಫ್, ಜಮಾಅತ್ ಸಮಿತಿಯ ಕೋಶಾಧಿಕಾರಿ ಆರ್.ಎಂ.ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News