ಕಾಞ೦ಗಾಡ್: ಡಿವೈಎಫ್ಐಯಿಂದ ರೈಲು ತಡೆದು ಪ್ರತಿಭಟನೆ

Update: 2018-02-13 10:59 GMT

ಕಾಸರಗೋಡು, ಫೆ.13: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ರೈಲ್ವೆ ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಹುನ್ನಾರವನ್ನು ಪ್ರತಿಭಟಿಸಿ ಡಿವೈಎಫ್ಐ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಕಾಞ೦ಗಾಡ್ ನಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಮಂಗಳೂರು -ಕೊಯಂಬತ್ತೂರು ಪ್ಯಾಸೆಂಜರ್ ರೈಲನ್ನು ತಡೆ ಹಿಡಿದರು.
 ಕಾಞ೦ಗಾಡ್ ರೈಲ್ವೆ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಡಿವೈಎಫ್ ಐ ಕೇಂದ್ರ ಸಮಿತಿಯ ಸದಸ್ಯೆ ಪಿ.ಪಿ.ದಿವ್ಯಾ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಶಿವಾಜಿ ವೆಳ್ಳಿಕೋತ್, ಕೆ.ಮಣಿಕಂಠನ್, ಟಿ.ಜಿ.ಸಜಿತ್, ಪಿ.ಕೆ.ನಿಶಾಂತ್, ರೇವತಿ ಮೊದಲಾದವರು ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News