ಮೂಲಂಗಿ ತಿಂದ ಐವರು ದಲಿತ ಬಾಲಕರ ನಗ್ನ ಮೆರವಣಿಗೆ ನಡೆಸಿದ ರೈತ

Update: 2018-02-14 18:15 GMT

ಚಂಡಿಗಢ, ಫೆ. 14: ಹೊಲದಿಂದ ಕೆಲವು ಮೂಲಂಗಿ ಕದ್ದು ತಿಂದ ಹಿನ್ನೆಲೆಯಲ್ಲಿ 8ರಿಂದ 10 ವರ್ಷ ವಯಸ್ಸಿನ ಐವರು ದಲಿತ ಬಾಲಕರನ್ನು ನಗ್ನರನ್ನಾಗಿಸಿ 3 ಕಿ.ಮೀ. ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಅಮೃತಸರದ ಸೋಹಿಯಾನ್ ಕಲಾ ಗ್ರಾಮದಲ್ಲಿ ಬುಧವಾರ ನಡೆದಿದೆ. ಐವರು ಬಾಲಕರು ತಾವು ಅನುಭವಿಸಿದ ಸಂಕಷ್ಟವನ್ನು ಹೇಳಿಕೊಂಡಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬಳಿಕ ಪಂಜಾಬ್ ಪೊಲೀಸರು ರೈತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ‘‘ಅವರ ಹೊಲಕ್ಕೆ ಗಾಳಿಪಟ ಪ್ರವೇಶಿಸದ ಬಳಿಕ ನಾವು ಅಲ್ಲಿಗೆ ಓಡಿದೆವು. ನಮಗೆ ಹಸಿವಾಗಿತ್ತು. ನಾವು ಅಲ್ಲಿ ಮೂಲಂಗಿ ನೋಡಿದೆವು. ಅಲ್ಲಿಯೇ ನಿಂತು ತಿಂದೆವು. ಇದನ್ನು ರೈತ ನೋಡಿದರು ಹಾಗೂ ನಮಗೆ ಥಳಿಸಿದರು’’ ಎಂದು ಬಾಲಕರು ಹೇಳಿದ್ದಾರೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಹೊಲದಲ್ಲಿ ಮೂಲಂಗಿ ತಿನ್ನುತ್ತಿದ್ದ ಬಾಲಕನ್ನು ಹಿಡಿದ ರೈತ ಚೆನ್ನಾಗಿ ಥಳಿಸಿದ್ದಾರೆ ಹಾಗೂ ಅವರ ಬಟ್ಟೆ ಬಿಚ್ಚಿಸಿ ಗದ್ದೆಯಲ್ಲಿ 3 ಕಿ.ಮೀ. ನಗ್ನ ಮೆರವಣಿ ಮಾಡಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News