ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

Update: 2018-02-17 09:19 GMT

ಮಂಗಳೂರು, ಫೆ.17: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮಾರ್ಚ್ 5ರಿಂದ 7ರವರೆಗೆ ಜರಗಲಿರುವ 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ವನ್ನು ಹಿರಿಯ ಸಾಹಿತಿ ಪ್ರೊ. ಅಮೃತ ಸೋಮೇಶ್ವರಅವರು ಬಿಡುಗಡೆಗೊಳಿಸಿದರು.

ಕೋಟೇಕಾರ್‌ನಲ್ಲಿರುವ ಅಮೃತರ ಮನೆ ಒಲುಮೆಯಲ್ಲಿ ಸಮಾರಂಭ ಜರಗಿತು. ಇದೇ ಸಂದರ್ಭದಲ್ಲಿ ಲಾಂಛನವನ್ನು ಸಿದ್ಧಪಡಿಸಿದ ಕಲಾವಿದ ಜಾನ್ ಚಂದ್ರನ್‌ರನ್ನು ಅಮೃತ ಸೋಮೇಶ್ವರ ಶಾಲು ಹೊದಿಸಿ ಅಭಿನಂದಿಸಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಡಾ.ಕೆ. ಚಿನ್ನಪ್ಪಗೌಡ ಅಮೃತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು.

ಅಮೃತರು ಬರೆದ ಭಾವ ಗಾನವೊಂದನ್ನು ರತ್ನಾವತಿ ಜೆ. ಬೈಕಾಡಿಯವರು ಹಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತತಿ ಪ್ರಾಧ್ಯಾಪಕ ಪ್ರೊ. ಸುರೇಂದ್ರರಾವ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಬೈಕಾಡಿ ಜನಾರ್ದನ ಆಚಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News