ಕೇರಳದಲ್ಲಿ ಪಟಾಕಿ ದುರಂತ; ಓರ್ವ ಮೃತ್ಯು

Update: 2018-02-17 14:41 GMT
ಸಾಂದರ್ಭಿಕ ಚಿತ್ರ

ಪತ್ತನಂತಿಟ್ಟ, ಫೆ. 17: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪ್ರತ್ಯಕ್ಷ ರಕ್ಷಾ ದೈವ ಸಭಾ (ಪಿಆರ್‌ಡಿಎಸ್) ಕೇಂದ್ರ ಕಚೇರಿಯಲ್ಲಿ ಪಟಾಕಿ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದಾನೆ ಹಾಗೂ 7 ಮಂದಿ ಗಾಯಗೊಂಡಿದ್ದಾರೆ. ಇಲ್ಲಿ ಪಟಾಕಿ ದಾಸ್ತಾನು ಮಾಡಲು ಅಧಿಕೃತವಾದ ಯಾವುದೇ ಪರವಾನಿಗೆ ನೀಡಿಲ್ಲ ಎಂದು ರಾಜ್ಯ ಸರಕಾರದ ಅಧಿಕಾರಿ ತಿಳಿಸಿದ್ದಾರೆ. ಗಾಯಗೊಂಡವರನ್ನು ಪುಷ್ಪಗಿರಿ ವೈದ್ಯಕೀಯ ಕಾಲೇಜು, ತಿರುವಲ್ಲದ ಸರಕಾರಿ ಆಸ್ಪತ್ರೆ ಹಾಗೂ ಕುಂಬನಾಡ್‌ನ ಫೆಲ್ಲೋಶಿಪ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News