ಪುತ್ತೂರು : ಚಾ ತಿಂಡಿ ಮಾರಾಟದ ಯುವಕ ಬಾಡಿಗೆ ಮನೆಯಲ್ಲಿ ಮೃತ್ಯು

Update: 2018-02-20 15:31 GMT

ಪುತ್ತೂರು, ಫೆ. 20: ಪುತ್ತೂರು ನಗರದಲ್ಲಿ ಅಂಗಡಿ, ಕಚೇರಿಗಳಿಗೆ ತೆರಳಿ ಚಾ-ತಿಂಡಿ ಮಾರಾಟ ಮಾಡುತ್ತಿದ್ದ ಯುವಕನೊಬ್ಬ ತನ್ನ ವಾಸ್ತವ್ಯದ ಬಾಡಿಗೆ ಮನೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ತಡ ರಾತ್ರಿ ಸಂಭವಿಸಿದೆ.

ಪೂಲತಃ ಕೇರಳದ ಕಾಸರಗೋಡಿನ ಪೆರಿಯಡ್ಕ ನಿವಾಸಿ ದಿವಂಗತ ಶಂಕರ ಪಾಟಾಳಿ ಅವರ ಪುತ್ರ, ಪುತ್ತೂರಿನ ಚೇತನಾ ಆಸ್ಪತ್ರೆಯ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ರಿತೇಶ್ (30) ಮೃತಪಟ್ಟ ಯುವಕ.

ಪುತ್ತೂರಿನ ಚೇತನಾ ಆಸ್ಪತ್ರೆಯ ಬಳಿ ತಾನು ವಾಸ್ತವ್ಯವಿದ್ದ ಬಾಡಿಗೆ ಮನೆಯಲ್ಲಿಯೇ ಚಾ, ತಿಂಡಿ ತಯಾರಿಸಿ ಪ್ರತಿದಿನ ನಗರದ ಅಂಗಡಿ ಕಚೇರಿಗಳಿಗೆ ಮಾರಾಟ ಮಾಡುವ ಕಾಯಕ ನಡೆಸುತ್ತಿದ್ದ ರಿತೀಶ್‌ಗೆ ಸೋಮವಾರ ರಾತ್ರಿ ಆತನ ಸಹೋದರಿ  ಮೊಬೈಲ್ ಕರೆ ಮಾಡಿದ್ದರು. ಆದರೆ ರಿತೇಶ್ ಮೊಬೈಲ್ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಸಂಶಯಗೊಂಡ ಆಕೆ ತನ್ನ ಇನ್ನೊಬ್ಬ ಸಹೋದರ ಹರಿಪ್ರಸಾದ್ ಎಂಬವರಿಗೆ ಮಾಹಿತಿ ನೀಡಿದ್ದರು. ಅವರು ಬಾಡಿಗೆ ಮನೆಗೆ ಬಂದು ನೋಡಿದಾಗ ರಿತೇಶ್ ಅವರ ಮೃತಪಟ್ಟಿದ್ದರು.

ಸೋಮವಾರ ಬೆಳಗ್ಗೆ ರಿತೇಶ್ ಅವರು ಸ್ಥಳೀಯ ಕೆಲವರಲ್ಲಿ ತನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿಕೊಂಡಿದ್ದರು. ರಾತ್ರಿಯ ವೇಳೆ ಅವರು ಮೃತಪಟ್ಟಿರು ವುದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಗೆ ಕಾರಣವಾಗಿದೆ. ಹೃದಯಾಘಾತ ಇಲ್ಲವೇ ಇನ್ನಾವುದೋ ಕಾರಣಗಳಿಂದಾಗಿ ರಿತೇಶ್ ಮೃತಪಟ್ಟಿರಬಹುದು ಎಂದು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News