ಸುರತ್ಕಲ್ ಕಡಲ ಕಿನಾರೆಯಲ್ಲಿ ಬೃಹತ್ ಗಾತ್ರದ ಸತ್ತ ತಿಮಿಂಗಿಲ

Update: 2018-02-21 06:12 GMT

ಮಂಗಳೂರು, ಫೆ. 21: ಸುರತ್ಕಲ್ ಕಡಲ ಕಿನಾರೆಯಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ.

ಅದು ಸುರತ್ಕಲ್ ನ ದೊಡ್ಡಕೊಪ್ಲ ಬೀಚ್ ನಲ್ಲಿ ಬಂದು ಬಿದ್ದಿದೆ. ಸತ್ತ ತಿಮಿಂಗಿಲವನ್ನು ವೀಕ್ಷಣೆಗೆ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

ಅದು ಸುಮಾರು 20 ಅಡಿ ಉದ್ದವಿದೆ ಎಂದು ಅಂದಾಜಿಸಲಾಗಿದೆ. ಮಂಗಳವಾರ ರಾತ್ರಿಯ ವೇಳೆ ಅಳೆಗಳ ಅಬ್ಬರಕ್ಕೆ ಅದು ತೀರಕ್ಕೆ ಬಂದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News