ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಮಂಗಳೂರು ಅಭಿಯಾನ

Update: 2018-02-25 12:41 GMT

ಮಂಗಳೂರು, ಫೆ.25: ನಗರದ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛ ಮಂಗಳೂರು ಅಭಿಯಾನದ 4ನೆ ಹಂತದ ಶ್ರಮದಾನವು ರವಿವಾರ ನಗರದ ಕದ್ರಿ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ಜರಗಿತು.

ಪುಣೆಯ ನಿವೃತ್ತ ಶಿಕ್ಷಕ ಚಂದ್ರಕಾಂತ ಕುಲಕರ್ಣಿ ಹಾಗೂ ವಿಶಿಷ್ಠ ಚೇತನ ಜಗನ್ ಅವರು ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಅಭಿಯಾನದ ಮಾರ್ಗದರ್ಶಿ ಗಣೇಶ ಕಾರ್ಣಿಕ್, ವಿಠಲದಾಸ ಪ್ರಭು, ಉಮಾಕಾಂತ ಸುವರ್ಣ, ಕಮಲಾಕ್ಷ ಪೈ, ಅಭಿಯಾನದ ಮುಖ್ಯ ಸಂಯೋಜಕ ದಿಲ್‌ರಾಜ್ ಆಳ್ವ ಮುಂತಾದವರು ಉಪಸ್ಥಿತರಿದ್ದರು.

ರಾಮಚಂದ್ರ ಭಟ್, ಡಾ. ಸತೀಶ್ ರಾವ್, ಫರೇನ್ಸ್ ಡಿಸೋಜ, ಜಸ್ವತ್, ನಳಿನಿ ಭಟ್, ಮುಖೇಶ್ ಆಳ್ವ, ಶಿಶಿರ ಅಮೀನ್, ಸುಜಿತ ಪ್ರತಾಪ, ಸೌರಜ್ ಮಂಗಳೂರು, ಸುಧೀರ ವಾಮಂಜೂರು,, ಮುಹಮ್ಮದ್ ಶಮೀಮ್, ಮುಬಾರಕ್, ನವೀನ ಕುಮಾರ್, ಕಿರಣ್ ಫೆರ್ನಾಂಡಿಸ್, ರವಿ ಕೆ.ಆರ್., ಜಯಕೃಷ್ಣ ಬೇಕಲ್, ಸಂದೇಶ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News