ಅಕ್ರಮ ಮರಳುಗಾರಿಕೆ ದಾಳಿ: ಸೊತ್ತು ವಶ

Update: 2018-02-25 16:52 GMT

ಬ್ರಹ್ಮಾವರ, ಫೆ. 25: ಚೇರ್ಕಾಡಿ ಗ್ರಾಮದ ಇಂಬರಗೊಳಿಯ ಮಡಿಸಾಲು ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಶನಿವಾರ  ದಾಳಿ ನಡೆಸಿದ ಅಧಿಕಾರಿಗಳ ತಂಡ ಸೊತ್ತು ವಶಪಡಿಸಿಕೊಂಡಿದೆ.

ಖಚಿತ ಮಾಹಿತಿಯಂತೆ ಹಿರಿಯ ಭೂ ವಿಜ್ಞಾನಿ ನಿರಂಜನ್ ಎ.ಎಂ. ನೇತೃತ್ವದಲ್ಲಿ ಚೇರ್ಕಾಡಿ ಗ್ರಾಮ ಲೆಕ್ಕಿಗರು, ಕಾರ್ಯದರ್ಶಿ ಮತ್ತು ಸಿಬ್ಬಂದಿ ಹಾಗೂ ಬ್ರಹ್ಮಾವರ ಭೂಮಾಪಕರೊಂದಿಗೆ ದಾಳಿ ನಡೆಸಿ, ಹಿಟಾಚಿ ಯಂತ್ರ ಹಾಗೂ ಸುಮಾರು 8 ಮೆಟ್ರಿಕ್ ಟನ್ ಮರಳುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News