ಚಾರ್ಮಾಡಿ: ಬಿಜೆಪಿ ಮುಖಂಡನ ಮನೆಯೆದುರು ಮಹಿಳೆ ಆತ್ಮಹತ್ಯೆ

Update: 2018-03-07 07:48 GMT

ಬೆಳ್ತಂಗಡಿ, ಮಾ.7: ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಹಾಗೂ ಬಜರಂಗ ದಳದ ಮುಖಂಡ ಓಬಯ್ಯ ಗೌಡ ಅವರ ಮನೆಯ ಮುಂದೆಯೇ ಸ್ಥಳೀಯ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.

ಮೃತರನ್ನು ಅದೇ ಗ್ರಾಮ ನಿವಾಸಿ ಲಕ್ಷ್ಮೀ ಎಂದು ಗುರುತಿಸಲಾಗಿದೆ. ನಿನ್ನೆ ತಡ ರಾತ್ರಿ ಓಬಯ್ಯರ ಮನೆ ಬಳಿಗೆ ಬಂದ ಲಕ್ಷ್ಮೀಯು ಓಬಯ್ಯರನ್ನು ಕರೆದಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಲಕ್ಷ್ಮೀ ಆತ್ಮಹತ್ಯೆಯ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದು, ಕೃತ್ಯಕ್ಕೆ ಓಬಯ್ಯರ ಪ್ರೇರಣೆ ಇತ್ತೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News