ವಿಟ್ಲ: ಕರ್ಣಾಟಕ ಬ್ಯಾಂಕಿನಿಂದ ಸಂತ ರೀಟಾ ವಿದ್ಯಾಸಂಸ್ಥೆಗೆ ಪ್ರಾಜೆಕ್ಟರ್-ಲ್ಯಾಪ್‌ಟಾಪ್ ಕೊಡುಗೆ

Update: 2018-03-08 10:03 GMT

ಮಂಗಳೂರು, ಮಾ.8: ಸಂತ ರೀಟಾ ವಿದ್ಯಾಸಂಸ್ಥೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಪ್ರಾಜೆಕ್ಟರ್ ಹಾಗೂ ಲ್ಯಾಪ್‌ಟಾಪ್ ಕೊಡುಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಶಾಲಾ ಜೊತೆ ಕಾರ್ಯದರ್ಶಿ ವಂ.ಫಾ.ಎರಿಕ್ ಕ್ರಾಸ್ತಾ, ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮೇಶ್ ಭಟ್, ಭಾರತಿ ಸೇವಾ ಟ್ರಸ್ಟ್ ವಿಟ್ಲ ಇದರ ಅಧ್ಯಕ್ಷ ಸುಬ್ರಾಯ ಪೈ, ಲಯನ್ಸ್ ಸೇವಾ ಟ್ರಸ್ಟ್ ವಿಟ್ಲ ಇದರ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ, ಕರ್ಣಾಟಕ ಬ್ಯಾಂಕ್ ಮಾಣಿಲ ಶಾಖೆ ವ್ಯವಸ್ಥಾಪಕ ಶಂಕರನಾರಾಯಣ ಹಾಗೂ ಶಾಲಾ ಸಮಿತಿಯ ಗೌರವ ಸಲಹೆಗಾರ ಸುದರ್ಶನ್ ಪಡಿಯಾರ್ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಪ್ರಾಜೆಕ್ಟರ್ ಹಾಗೂ ಲ್ಯಾಪ್‌ಟಾಪ್‌ನ್ನು ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು. ಶಾಲಾ ಸಂಚಾಲಕರು ಸನ್ಮಾನಿಸಿ ಗೌರವಿಸಿದರು.

 ಸಚಿನ್ ಎಂ. ಕಾರ್ಯಕ್ರಮ ನಿರ್ವಹಿಸಿದರು. ಜಯರಾಮ ಶಾಸ್ತ್ರಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News