ರಾಜ್ಯಸಭಾ ಚುನಾವಣೆ ವಿನಯ್ ಕಟಿಯಾರ್‌ರನ್ನು ಕೈಬಿಟ್ಟ ಬಿಜೆಪಿ

Update: 2018-03-12 16:16 GMT

 ಲಕ್ನೋ, ಮಾ. 12: ಬಿಜೆಪಿಯ ಹಿರಿಯ ಸಂಸದ ವಿನಯ್ ಕಟಿಯಾರ್ ‘ಮುಸ್ಲಿಮರು ದೇಶದಲ್ಲಿ ಇರಬಾರದು’ ಎಂದು ಹೇಳಿಕೆ ನೀಡಿದ ದಿನಗಳ ಬಳಿಕ ಬಿಜೆಪಿ ಅವರನ್ನು ಮೂಲೆ ಗುಂಪು ಮಾಡಲು ಹಾಗೂ ಅವರ ಬದಲಿಗೆ ಸಮಾಜವಾದಿ ಪಕ್ಷದಿಂದ ಪಕ್ಷಾಂತರಗೊಂಡ ಇಬ್ಬರಿಗೆ ರಾಜ್ಯಸಭಾ ಟಿಕೆಟ್ ನೀಡಲು ನಿರ್ಧರಿಸಿದೆ. ಸಂಸತ್ತಿನ ಮೇಲ್ಮನೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ವಿವಿಧ ರಾಜ್ಯಗಳ 18 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿ ಕಟಿಯಾರ್ ಅವರ ಹೆಸರಿಲ್ಲ. ಉತ್ತರಪ್ರದೇಶದಿಂದ 8 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸಮಾಜವಾದಿ ಪಕ್ಷದ ಮಾಜಿ ನಾಯಕರಾದ ಅಶೋಕ್ ಬಾಜಪಾ ಹಾಗೂ ಹರನಾಥ್ ಸಿಂಗ್ ಯಾದವ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News