ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಕಾಶ್ ರೈಗೆ ಬೆದರಿಕೆ!

Update: 2018-03-14 08:39 GMT

ಮಂಗಳೂರು, ಮಾ.14: ನಗರದಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ನಿನ್ನೆ ರಾತ್ರಿ ಆಗಮಿಸಿದ್ದ ಖ್ಯಾತ ನಟ ಪ್ರಕಾಶ್ ರೈ ಅವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್ ವತಿಯಿಂದ ನಡೆದ ಪತ್ರಕರ್ತರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಸ್ವತಃ ಪ್ರಕಾಶ್ ರೈ ಅವರೇ ಸ್ಪಷ್ಟಪಡಿಸಿದರು.

‘‘ವಿಮಾನ ನಿಲ್ದಾಣಕ್ಕೆ ನಿನ್ನೆ ಬಂದ ಸಂದರ್ಭ ನನ್ನ ಕಾರು ಚಾಲಕನ ಬಳಿ ನಾಲ್ವರು ಅಪರಿಚಿತರು ಬಂದು ಪ್ರಶ್ನಿಸಿದ್ದಾರೆ. ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಂದು ಕೇಳಿರುವುದಲ್ಲದೆ ಕಾರು ಚಾಲಕನಿಗೆ ಬೆದರಿಸಿ ಧಮ್ಕಿ ಕೂಡಾ ಹಾಕಿದ್ದಾರೆ. ಈ ಸಂದರ್ಭ ಅಲ್ಲಿಗೆ ಪೊಲೀಸರು ಬಂದ ಕಾರಣ ಅಪರಿಚಿತರು ಸ್ಥಳದಿಂದ ತೆರಳಿದ್ದಾರೆ. ಇಂತಹ ಭಯ ಹುಟ್ಟಿಸುವ ವಾತಾವರಣವನ್ನು ನನ್ನ ನೆಲದಲ್ಲೇ ಸೃಷ್ಟಿಸುತ್ತಿರುವ ಬಗ್ಗೆ ನನಗೆ ಬೇಸರವಾಗುತ್ತಿದೆ’’ ಎಂದು ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News