ಮದುವೆ ನಿಶ್ಚಿತಾರ್ಥಕ್ಕೆ ಮೊದಲೇ ಯುವತಿ ನಾಪತ್ತೆ

Update: 2018-03-14 17:19 GMT

ಬೈಂದೂರು, ಮಾ.14: ಮದುವೆ ನಿಶ್ಚಿತಾರ್ಥ ನಿಗದಿಯಾಗಿದ್ದ ಯುವತಿ ಯೊಬ್ಬಳು ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಮಾ.12ರಂದು ಸಂಜೆ ವೇಳೆ ಶಿರೂರು ಎಂಬಲ್ಲಿ ನಡೆದಿದೆ.

ನಾಪತ್ತೆಯಾದವಳನ್ನು ಶಿರೂರು ಗ್ರಾಮದ ಮಂಜುನಾಥ ಮೊಗೇರ ಎಂಬವರ ಮಗಳು ವಿನುತಾ(19) ಎಂದು ಗುರುತಿಸಲಾಗಿದೆ. ಈಕೆಗೆ ಮದುವೆ ನಿಶ್ಚಯ ಆಗಿದ್ದು, ಮಾ.25ರಂದು ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿ ಪಡಿಸಲಾಗಿತ್ತು. ಮಾ.12ರಂದು ವಿನುತಾ ಬೈಂದೂರಿನ ಬಿಸಿಎಂ ಹಾಸ್ಟೆಲ್‌ನಲ್ಲಿ ರುವ ತನ್ನ ಅಕ್ಕನಿಗೆ ಬಟ್ಟೆಗಳನ್ನು ಕೊಟ್ಟು ಬರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ.

ಆಕೆಯ ಕೋಣೆಯಲ್ಲಿ ಪತ್ತೆಯಾದ ಪತ್ರದಲ್ಲಿ ‘ನನಗೆ ಮದುವೆ ಇಷ್ಟ ಇಲ್ಲ, ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಅವನು ಬೆಂಗಳೂರಿನಲ್ಲಿದ್ದು ನಾನು ಅವನ ಜೊತೆ ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ. ಒಂದು ವಾರದ ನಂತರ ನಾನೇ ಪೋನ್ ಮಾಡುತ್ತೇನೆ ಎಂದು ಬರೆದಿಟ್ಟಿದ್ದಾಳೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News