ಬಿಜೆಪಿ ಜೊತೆಗೆ ಯಾವುದೇ ಮೈತ್ರಿಯಿಲ್ಲ: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ

Update: 2018-03-21 18:02 GMT

ಚೆನ್ನೈ, ಮಾ.21: ಬಿಜೆಪಿ ಜೊತೆಗೆ ನಮಗೆ ಯಾವುದೇ ಮೈತ್ರಿಯಿಲ್ಲ ಹಾಗು ಬೆಂಬಲವೂ ಇಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಹೇಳಿದ್ದಾರೆ. “ಬಿಜೆಪಿ ಜೊತೆ ಯಾವುದೇ ಮೈತ್ರಿಯಿಲ್ಲ, ಬಿಜೆಪಿಗೆ ಬೆಂಬಲ ನೀಡುವುದೂ ಇಲ್ಲ”  ಎಂದು ವಿಧಾನಸಭೆಯಲ್ಲಿ ಪಳನಿಸ್ವಾಮಿ ಹೇಳಿದರು.

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಕಾವೇರಿ ನಿರ್ವಹಣಾ ಮಂಡಳಿಯ ಸ್ಥಾಪನೆ ವಿಚಾರದಲ್ಲಿ ತಮಿಳುನಾಡು ಸರಕಾರವು ಕೇಂದ್ರ ಸರಕಾರದ ಬಗ್ಗೆ ಮೃದು ಧೋರಣೆಯನ್ನು ಹೊಂದಿದೆ ಎನ್ನುವ ವಿಪಕ್ಷಗಳ ಆರೋಪಗಳಿಗೆ ಸಂಬಂಧಿಸಿ ಈ ರೀತಿ ಅವರು ಪ್ರತಿಕ್ರಿಯಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿ ಎಐಎಡಿಎಂಕೆ ಸಂಸದರು ಸಂಸತ್ ನಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News