ಕಾಸರಗೋಡು: ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿಗೆ ಆಯ್ಕೆ

Update: 2018-03-22 08:09 GMT

ಕಾಸರಗೋಡು, ಮಾ.21: ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಮಿಟಿ ಸಭೆಯು ರಾಜ್ಯ ಸಮಿತಿಯ ಸದಸ್ಯ ಕೆ.ಪಿ.ಸತೀಶ್ಚಂದ್ರನ್‌ರವರ ಅಧ್ಯಕ್ಷತೆ ಯಲ್ಲಿ ಜರುಗಿತು. 

ಈ ಸಂದರ್ಭ ನೂತನ ಜಿಲ್ಲಾ ಕಾರ್ಯದರ್ಶಿ ಮಂಡಳಿಗೆ ಸದಸ್ಯರ ಆಯ್ಕೆ ನಡೆಯಿತು. 

ನೂತನ ಕಾರ್ಯದರ್ಶಿ ಮಂಡಳಿಗೆ ಎಂ.ವಿ. ಬಾಲಕೃಷ್ಣನ್, ಪಿ.ರಾಘವನ್, ಡಾ.ವಿ.ಪಿ.ಪಿ.ಮುಸ್ತಾಫ, ಕೆ.ವಿ. ಕುಂಞಿರಾಮನ್, ಪಿ.ಜನಾರ್ದನನ್, ಎಂ.ರಾಜಗೋಪಾಲನ್, ವಿ.ಕೆ.ರಾಜನ್, ಕೆ.ಆರ್.ಜಯಾನಂದ್ ಮತ್ತು ಅಬ್ರಹಾಂ ರನ್ನು ಆಯ್ಕೆ ಮಾಡಲಾಯಿತು. ಕಾಸರಗೋಡು ವಲಯ ಕಾರ್ಯದರ್ಶಿ ಮುಹಮ್ಮದ್ ಹನೀಫ್‌ರನ್ನು ಜಿಲ್ಲಾ ಕಮಿಟಿಗೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News