ಸಜಿಪನಡು: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಅನುಸ್ಮರಣೆ, ರಕ್ತದಾನ ಶಿಬಿರ, ಮಜ್ಲಿಸುನ್ನೂರ್ ಕಾರ್ಯಕ್ರಮ
Update: 2018-03-23 10:58 GMT
ಬಂಟ್ವಾಳ,ಮಾ.23: ಎಸ್ಕೆಎಸ್ಸೆಸ್ಸೆಫ್ ಸಜಿಪನಡು ಶಾಖೆಯ ವತಿಯಿಂದ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ, ರಕ್ತದಾನ ಶಿಬಿರ, ಮಜ್ಲಿಸುನ್ನೂರ್, ಹಾಗೂ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮವು ಮಾರ್ಚ್ 23 ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಮರ್ಹೂಂ ಸಜೀಪ ಉಸ್ತಾದ್ ವೇದಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಾ.23 ರಂದು ಮತ ಪ್ರಭಾಷಣ, 24 ರಂದು ಸುನ್ನೀ ಆಶಯ ವಿಷದೀಕರಣ ಹಾಗೂ ಮುಖಾಮುಖಿ, 25 ರಂದು ಬೆಳಿಗ್ಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಅದೇ ದಿನ ರಾತ್ರಿ ಮಜ್ಲಿಸುನ್ನೂರ್ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ