ಸುನೀಲ್ ಕುಮಾರ್ ಬಜಾಲ್ ರಿಗೆ ಪಿತೃ ವಿಯೋಗ

Update: 2018-03-24 18:39 GMT

ಮಂಗಳೂರು, ಮಾ. 24: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಅವರ ತಂದೆ ಶ್ರೀದರ್ ಕುಂಟಲ್ ಗುಡ್ಡೆ ಶನಿವಾರ ರಾತ್ರಿ ನಿಧನರಾದರು.

ಅವರು ಅಲ್ಪ ಕಾಲದ  ಅಸೌಖ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬಾಲ್ಯದ ದಿನದಿಂದಲೇ ರೈತ ಕಾರ್ಮಿಕ ಚಳುವಳಿಯ ಕಡೆಗೆ ಆಕರ್ಷಿತರಾಗಿ ಜೀವನದ ಕೊನೆಯವರೆಗೂ  ಕಮ್ಯುನಿಸ್ಟ್ ಪಕ್ಷದ ಶಿಸ್ತಿನ ಕಟ್ಟಾಳುವಾಗಿ ದುಡಿದರು. ಅಳಪೆ ಪ್ರದೇಶ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾಗಿ, ಸದ್ಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ರವಿವಾರ ಬೆಳಗ್ಗೆ 8:30ರಿಂದ 11ರವರೆಗೆ ಬಜಾಲು ಕುಂಟಲಗುಡ್ಡೆಯ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನ ಪಡೆಯಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News