ಸರಕಾರಿ ಶಾಲಾ ಶಿಕ್ಷಕಿ ಮೃತ್ಯು
Update: 2018-04-17 17:32 GMT
ಪಡುಬಿದ್ರಿ, ಎ.17: ಅನಾರೋಗ್ಯದಿಂದ ಬಳಲುತ್ತಿದ್ದ ಮೂಡಬಿದ್ರಿಯ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಲಕ್ಷ್ಮೀ(54) ಎಂಬವರು ಎ.16 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸ್ವಸ್ಥಗೊಂಡು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕಳೆದ ಆರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮೀ ಶಾಲೆಯ ರಜೆಯ ಕಾರಣ ಕುಂಭಾಶಿಯಲ್ಲಿರುವ ಮಗಳು ಡಾ.ಸರ್ವಮಂಗಳ ಎಂಬವರ ಮನೆಯಲ್ಲಿ ವಾಸವಾಗಿದ್ದರು. ಎಸೆಸೆಲ್ಸಿ ಮೌಲ್ಯಮಾಪನ ಕರ್ತವ್ಯ ರದ್ದುಪಡಿಸಲು ಮಗಳ ಜೊತೆ ಕಾರಿನಲ್ಲಿ ಮಂಗಳೂರಿಗೆ ಹೋಗಿ ವಾಪಾಸ್ಸು ಬರುತ್ತಿದ್ದ ಇವರು ಹೆಜಮಾಡಿಯ ಟೋಲ್ಗೇಟ್ ಬಳಿ ಅಸ್ವಸ್ಥಗೊಂಡರೆನ್ನಲಾಗಿದೆ. ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.