ಮಂಗಳೂರು ಉತ್ತರ ಕ್ಷೇತ್ರ: ಸಿಪಿಎಂ ನಿಂದ ಮುನೀರ್ ಕಾಟಿಪಳ್ಳ ನಾಮಪತ್ರ ಸಲ್ಲಿಕೆ

Update: 2018-04-19 08:09 GMT

ಮಂಗಳೂರು, ಎ. 19: ಮಂಗಳೂರು ಉತ್ತರ ಕ್ಷೇತ್ರಕ್ಕೆ ಸಿಪಿಎಂ ನಿಂದ ಮುನೀರ್ ಕಾಟಿಪಳ್ಳ ಗುರುವಾರ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಮುನೀರ್ ಕಾಟಿಪಳ್ಳ ಅವರು ಹಣ ಖರ್ಚು ಮಾಡುವ ಪ್ರಶ್ನೆಯೇ ಇಲ್ಲ. ಜನಬೆಂಬಲದೊಂದಿಗೆ ಜನರಾಜಕರಣ ಮಾಡುತ್ತೇನೆ. ಕ್ಷೇತ್ರದಲ್ಲಿ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ಸರಕಾರಿ ಕಾಲೇಜು, ಆಸ್ಪತ್ರೆಗಳಿದ್ದರೂ ಕೂಡ ಸುರತ್ಕಲ್ ವ್ಯಾಪ್ತಿಯಲ್ಲಿ ಯಾವುದೇ ಸರಕಾರಿ ಆಸ್ಪತ್ರೆ, ಕಾಲೇಜುಗಳಿಲ್ಲ ಅದಕ್ಕೆ ನನ್ನ ಆದ್ಯತೆ ಮತ್ತು ಪರಿಸರ ಸ್ನೇಹಿ ಉದ್ಯಮದ ಮೂಲಕ ಇಲ್ಲಿನ ಯುವ ಜನರಿಗೆ ಉದ್ಯೋಗ ಕಲ್ಪಿಸುವುದು. ಇಲ್ಲಿನ ಪ್ರತಿನಿಧಿಗಳು ವ್ಯಾಪಾರಸ್ಥರನ್ನು ಪ್ರತಿನಿಧಿಸುತ್ತಿದ್ದರೆ ನಾನು ಇಲ್ಲಿನ ಬಡ ಸಮುದಾಯವನ್ನು ಪ್ರತಿನಿಧಿಸುತ್ತಿದ್ದೇನೆ. ಹಣ ಖರ್ಚು ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. 

ಈ ಸಂದರ್ಭ ಬಿ.ಕೆ. ಇಂಮ್ತಿಯಾಝ್, ಯು.ಬಿ.ಲೋಕಯ್ಯ, ಗಂಗಯ್ಯ ಅಮೀನ್, ಸುನಂದ ಕೊಂಚಾಡಿ ನಾಪಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News