ಪ್ರಧಾನಿ ಮೋದಿ ಓರ್ವ ವಂಚಕ, ದ್ರೋಹಿ ಎಂದ ಟಿಡಿಪಿ ಶಾಸಕ ಬಾಲಕೃಷ್ಣ

Update: 2018-04-21 14:05 GMT

ವಿಜಯವಾಡ, ಎ.21: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕುರಿತಂತೆ ಟಿಡಿಪಿ ಬಿಜೆಪಿ ಜೊತೆಗೆ ಮೈತ್ರಿ ಕಡಿದುಕೊಂಡ ನಂತರವೂ ಪಕ್ಷವು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿರುವ, ನಟ, ರಾಜಕಾರಣಿ ಬಾಲಕೃಷ್ಣ ಅವರು ನರೇಂದ್ರ ಮೋದಿ ವಂಚಕ ಮತ್ತು ದ್ರೋಹಿ ಎಂದಿದ್ದಾರೆ.

ವಿಜಯವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಮೋದಿಜೀ ಆಂಧ್ರ ಪ್ರದೇಶವು ಗುಜರಾತ್ ಅಲ್ಲ. ನಿಮ್ಮ ನಿಯಮ ಇಲ್ಲಿ ನಡೆಯುವುದಿಲ್ಲ. ತೆಲುಗು ಜನರು ಧೈರ್ಯವಂತರು” ಎಂದವರು ಹೇಳಿದರು.

ಚಂದ್ರಬಾಬು ನಾಯ್ಡು ಜನ್ಮ ದಿನಾಚರಣೆ ಪ್ರಯುಕ್ತ ಟಿಡಿಪಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇವಲ ಆಂಧ್ರ ಪ್ರದೇಶ ಮಾತ್ರವಲ್ಲ, ಇಡೀ ಭಾರತದ ಜನರೇ ನಿಮ್ಮ ವಿರುದ್ಧವಿದ್ದಾರೆ. ನೀವೊಬ್ಬ ವಂಚಕ ಹಾಗು ದ್ರೋಹಿ ಎಂದು ನಾನು ಹೇಳುತ್ತೇನೆ. ಹೊರಗೆ ಬಂದು ಜನರೊಂದಿಗೆ ಮಾತನಾಡಿ. ಇಲ್ಲದಿದ್ದರೆ ಜನರು ನಿಮ್ಮ ಬೆನ್ನತ್ತಿ ಹೊಡೆಯಬಹುದು” ಎಂದವರು ಹೇಳಿದರು.

ಬಾಲಕೃಷ್ಣ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News