ಕುಂದಾಪುರ: ಖಿದ್ಮಾ ಫೌಂಡೇಷನ್ ಸ್ಥಾಪಕ ಶೇಖ್ ಅಬ್ದುಲ್ ಗಫೂರ್ ಸಾಹೆಬ್ ನಿಧನ
Update: 2018-04-23 05:31 GMT
ಕುಂದಾಪುರ, ಎ. 23: ಇಲ್ಲಿನ ಬಸ್ರೂರು ನಿವಾಸಿ ಶೇಖ್ ಅಬ್ದುಲ್ ಗಫೂರ್ ಸಾಹೆಬ್ (54) ಸೌದಿ ಅರೇಬಿಯಾದ ರಿಯಾದ್ ನಲ್ಲಿ ರವಿವಾರ ನಿಧನರಾದರು.
ಖಿದ್ಮಾ ಫೌಂಡೇಷನ್ ಇದರ ಸ್ಥಾಪಕಾಧ್ಯಕ್ಷರು, ಹಾಲಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಅವರು ಬಸ್ರೂರ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದರ ಸ್ಥಾಪಕರಾಗಿದ್ದರು.
ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ್ದ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಸಮಾಜ ಸೇವಕರಾದ ಮುಹಮ್ಮದ್ ಹನೀಫ್ ಹಾಗೂ ಶೇಖ್ ಅಸ್ಗರ್ ಅಲಿ ಅವರ ಹಿರಿಯ ಸಹೋದರನಾಗಿರುವ ಶೇಖ್ ಅಬ್ದುಲ್ ಗಫೂರ್ ಸಾಹೆಬ್ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.