ಬಂಟ್ವಾಳ ವಿಧಾನಸಭಾ ಕ್ಷೇತ್ರ: ಇಬ್ರಾಹಿಂ ಕೈಲಾರ್ ನಾಮಪತ್ರ ಸಲ್ಲಿಕೆ

Update: 2018-04-23 17:23 GMT

ಬಂಟ್ವಾಳ, ಎ. 23: ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಇಬ್ರಾಹಿಂ ಕೈಲಾರ್ ಸೋಮವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಅವರ ಬೆಂಬಲಿಗರಾದ ಸೌಕತ್ ಅಲಿ, ರಹೀಂ ಬೊಳ್ಳಾಯಿ, ಇಲ್ಯಾಸ್ ನಂದಾವರ, ರಮೇಶ್ ಅವರು ಉಪಸ್ಥಿತರಿದ್ದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರೆಂಬುದು ಈವರೆಗೂ ಪಕ್ಷದಿಂದ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಇಬ್ರಾಹಿಂ ಕೈಲಾರ್ ಸಹಿತ, ಮುಹಮ್ಮದ್ ಶಫಿ, ರಹೀಂ ಬಿ.ಸಿ.ರೋಡ್, ಅಬೂಬಕರ್ ಅಮ್ಮುಂಜೆ, ಪ್ರಕಾಶ್ ಗೋಮ್ಸ್ ಅವರ ಹೆಸರನ್ನು ಬಂಟ್ವಾಳ ಕ್ಷೇತ್ರ ಜೆಡಿಎಸ್ ಸಮಿತಿ ಪಕ್ಷದ ರಾಜ್ಯ ಘಟಕಕ್ಕೆ ಶಿಫಾರಸು ಮಾಡಿದೆ.

ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದ್ದು, ಪಕ್ಷದ ಬಿಫಾರಂ ಇಲ್ಲದೆ ಮತ್ತು ಪಕ್ಷದ ಕ್ಷೇತ್ರ ಸಮಿತಿಯ ಅಧ್ಯಕ್ಷರ ಗಮನಕ್ಕೂ ತಾರದೆ ಇಬ್ರಾಹಿಂ ಅವರು ಜೆಡಿಎಸ್ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.

ಈ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಕೂಡ ಪ್ರತ್ಯೇಕ ನಾಮಪತ್ರ ಸಲ್ಲಿಸಿರುವುದು ಇಲ್ಲಿ ಗಮನಾರ್ಹವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಬ್ರಾಹಿಂ ಅವರು ಕೆಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಬಳಿಕ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News